ಜನಶ್ರೀ ಕುರಿತು ಬರೆದ ಪೋಸ್ಟ್‌ಗೆ ಬಂದ ಕೆಲವು ಪ್ರತಿಕ್ರಿಯೆಗಳು ಇಂಟರೆಸ್ಟಿಂಗ್ ಆಗಿದ್ದವು. ಒಂದೆರಡು ಪ್ರತಿಕ್ರಿಯೆಗಳನ್ನು ಗಮನಿಸಿ.

ಜನಶ್ರೀ ಟೀವಿ ಚಾನೆಲ್ ಎಂದು ಬರುತ್ತದೆ ಎಂಬ ಕುತೂಹಲ ಕೇವಲ ಜರ್ನಲಿಸ್ಟುಗಳಾದ ನಿಮಗೆ ಇದೆಯೇ ಹೊರತು ನಮ್ಮಂಥ ಸಾಮಾನ್ಯ ಟೀವಿ ವೀಕ್ಷಕನಿಗೆ ಖಂಡಿತವಾಗಿಯೂ ಇಲ್ಲ. ಹೇಳಿ ಕೇಳಿ, ಇದು ವಿವಾದಾತ್ಮಕ ರಾಜಕಾರಣಿಯ ಮಾಲಿಕತ್ವದ್ದು. ಅಂದ ಮೇಲೆ ಅವರ ವಿರುದ್ಧದ ಆಪಾದನೆಗಳನ್ನು ನಿರಾಕರಿಸುವಂಥ ರಾಜಕೀಯ ನಿಲುವು ಇರುತ್ತದೆ, ಸಂದೇಹವೇ ಇಲ್ಲ.  ಪತ್ರಿಕೆಗಳಿಂದ, ಇತರ ಚಾನೆಲ್‌ಗಳಿಂದ ಹೆಚ್ಚಿನ ಸಂಬಳದ ಆಸೆಗೆ ಕೆಲಸ ಬದಲಾಯಿಸುವವರಿಗೆ ಮಾತ್ರ ಹೊಸ ಚಾನೆಲ್ ಆಗಮನ ಖುಷಿ ತರುತ್ತಿರಬಹುದು.


yes. really true. Laymen like us are really not interested in Janaashree news chnl. we do not expect any miracle from that new, upcoming news chnl. It is an another business for them. may be this is the factor which pricking its management.and they are delaying its launch. Any way for journalists, it is an another company to get salary for their degree.


ಎರಡೂ ಅಭಿಪ್ರಾಯಗಳು ನಿಜ. ಜನಶ್ರೀ ಕುರಿತು ಯಾರಿಗೂ ಅಂಥ ವಿಶೇಷವಾದ ನಿರೀಕ್ಷೆಗಳೇನೂ ಇಲ್ಲ. ರೆಡ್ಡಿ ಸೋದರರು ನಡೆಸುವ ಈ ಚಾನೆಲ್ ಹೇಗಿರುತ್ತದೆ ಎಂದು ಸುಲಭವಾಗಿ ಊಹಿಸಬಹುದು.

ಉದಾಹರಣೆಯಾಗಿ ಕಸ್ತೂರಿ ಟಿವಿ ನಮ್ಮ ಕಣ್ಣ ಮುಂದೆಯೇ ಇದೆ.

ಅನಿತಾ ಕುಮಾರಸ್ವಾಮಿ ಮಧುಗಿರಿಗೆ ಭೇಟಿ ಅನ್ನೋದೂ ಕಸ್ತೂರಿ ವಾಹಿನಿಯಲ್ಲೊಂದು ಫ್ಲಾಶ್ ನ್ಯೂಸ್! ಅಲ್ಲಾ ಕಣ್ರೀ, ಅನಿತಾ ಕುಮಾರಸ್ವಾಮಿ ಮಧುಗಿರಿಯ ಶಾಸಕಿ. ಅವರು ಇರಬೇಕಾಗಿದ್ದೇ ಮಧುಗಿರಿಯಲ್ಲಿ. ಹೀಗೆಲ್ಲ ಸುದ್ದಿ ಮಾಡಿ ಅವರ ಮಾನ ಯಾಕೆ ಕಳೀತೀರಾ ಅಂದ್ರೆ, ಇಲ್ಲ ಗುರುವೇ ನಮ್ಮ ಕರ್ಮ, ನಾವು ಹಾಗೆ ಸುದ್ದಿ ಮಾಡಲೇಬೇಕು ಅನ್ನುತ್ತಾರೆ ಕಸ್ತೂರಿಯ ವರದಿಗಾರರು.

ಸರ್ಕಾರದ ವಿರುದ್ಧ ದಿನಕ್ಕೆ ಮೂರರಿಂದ ನಾಲ್ಕು ಪ್ಯಾಕೇಜ್ ಸ್ಟೋರಿಗಳು. ಕುಮಾರಸ್ವಾಮಿ, ರೇವಣ್ಣ, ದೇವೇಗೌಡರು ಎಲ್ಲಿಲ್ಲಿ ಇರ‍್ತಾರೋ ಅಲ್ಲಿಲ್ಲಿಂದ ತಲಾ ಒಂದೊಂದು ಸ್ಟೋರಿ. ಇನ್ನು ಜೆಡಿಎಸ್ ಇತರ ಲೀಡರುಗಳಿಗೆ ಒಂದೆರಡು ನಿಮಿಷ. ಅರ್ಧ ಗಂಟೆಯ ಬುಲೆಟಿನ್‌ನಲ್ಲಿ ಇನ್ನೇನು ಉಳಿಯಿತು? ಯಾಕೆ ಹೀಗೆಲ್ಲ ಮಾಡ್ತೀರಿ ಅಂದ್ರೆ, ಅದು ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ಎನ್ನುತ್ತಾರೆ ವರದಿಗಾರರು.

ಒಮ್ಮೊಮ್ಮೆ ಕಸ್ತೂರಿ ಪತ್ರಕರ್ತರು ಒಳ್ಳೆ ತನಿಖಾ ವರದಿಗಳನ್ನೇ ಮಾಡುತ್ತಾರೆ. ಯಡಿಯೂರಪ್ಪನವರ ಹಗರಣಗಳು ಹೊರಬಂದಾಗ ಹೆಚ್ಚಿನ ಸುದ್ದಿಗಳನ್ನು ಬ್ರೇಕ್ ಮಾಡಿದ್ದು ಕಸ್ತೂರಿ ನ್ಯೂಸೇ. ಆದರೆ ಏನು ಪ್ರಯೋಜನ? ಇದು ಜೆಡಿಎಸ್ ತುತ್ತೂರಿ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಕಸ್ತೂರಿಯ ನ್ಯೂಸನ್ನು ನೋಡೋದೆ ಇಲ್ಲ. ನೋಡಿದವರು ಆಪೋಜಿಷನ್ ಪಾರ್ಟಿಯವರಲ್ವಾ? ಏನೇನೋ ಮಾಡ್ತಾರೆ ಎಂದು ಮೂಗು ಮುರಿಯುತ್ತಾರೆ. ಅಲ್ಲಿಗೆ ವರದಿಗಾರರು ಕಷ್ಟಪಟ್ಟು ತಂದು ಮಾಡಿದ ಸುದ್ದಿ ಖಲ್ಲಾಸ್.

ದೇವೇಗೌಡರು ಗುಡುಗಿದ್ದಾರೆ, ಕುಮಾರಸ್ವಾಮಿ ಕೆರಳಿದ್ದಾರೆ, ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ, ಚೆಲುವರಾಯಸ್ವಾಮಿ ಚಾಟಿ ಬೀಸಿದ್ದಾರೆ, ದತ್ತ ಕಿಡಿಕಿಡಿಯಾಗಿದ್ದಾರೆ ಅಂತ ಎಷ್ಟು ದಿನ ಹೇಳಿಕೊಂಡು ಇರ‍್ತೀರಿ? ಇವತ್ತಿನ ಪೈಪೋಟಿ ಯುಗದಲ್ಲಿ ನಿಮ್ಮ ನ್ಯೂಸನ್ನು ಯಾರು, ಯಾಕೆ ನೋಡಬೇಕು? ಹೀಗೆಲ್ಲ ಕೇಳಿ ನೋಡಿ, ಕಸ್ತೂರಿ ಪತ್ರಕರ್ತರು ಪೆಚ್ಚಾಗಿ ಹೋಗುತ್ತಾರೆ, ಅವರ ಬಳಿ ಉತ್ತರಗಳಿಲ್ಲ.

ಈ ಚಂದಕ್ಕೆ ಕಸ್ತೂರಿಯನ್ನು ನ್ಯೂಸ್ ಚಾನೆಲ್ ಮಾಡುವ ಐಡಿಯಾ ಬೇರೆ ಕುಮಾರಸ್ವಾಮಿಯವರಿಗೆ ಇದೆ. ಇದೇ ಧೋರಣೆ, ಜೆಡಿಎಸ್ ಭಟ್ಟಂಗಿತನ ಇಟ್ಟುಕೊಂಡಿದ್ದರೆ ನ್ಯೂಸ್ ಚಾನಲ್ ಕಥೆ ಅಷ್ಟೆ. ಕನಿಷ್ಟ ಎಂಟರ್‌ಟೈನ್‌ಮೆಂಟ್‌ಗಾಗಿಯಾದರೂ ಎಲ್ಲರೂ ಕಸ್ತೂರಿಯನ್ನು ಆಗೊಮ್ಮೆ ಈಗೊಮ್ಮೆ ನೋಡುತ್ತಿರುತ್ತಾರೆ. ಇದೇ ನಿಲುವು ಇಟ್ಟುಕೊಂಡು ನ್ಯೂಸ್ ಚಾನಲ್ ಮಾಡಿದರೆ ಸ್ವತಃ ಕಾಲಭೈರವೇಶ್ವರನೂ ಕಾಪಾಡಲಾರ. ಹಾದಿಬೀದಿಯಲ್ಲೂ ಜೆಡಿಎಸ್ ಪೋಸ್ಟರುಗಳಿರುತ್ತವೆ, ಟಿವಿಯಲ್ಲೂ ಅದೇ ನೋಡಬೇಕಾ?

ತಮಿಳುನಾಡಿನಲ್ಲಿ ಸನ್ ಟಿವಿ, ಜಯ ಟಿವಿಯಂಥವು ಬೆಳೆದುಕೊಂಡವು ನಿಜ. ಅಲ್ಲಿನ ಜನ ರಾಜಕಾರಣಿಗಳ ಬಗ್ಗೆ ವಿಚಿತ್ರ ವ್ಯಾಮೋಹ ಇಟ್ಟುಕೊಂಡವರು. ಹೀಗಾಗಿ ರಾಜಕಾರಣಿಗಳು ಆರಂಭಿಸಿದ ಚಾನಲ್‌ಗಳನ್ನೂ ಪ್ರೀತಿಸಿದರು. ಕರ್ನಾಟಕದಲ್ಲಿ ಹಾಗಿಲ್ಲ. ರಾಜಕಾರಣಿಗಳನ್ನು ಪ್ರೀತಿಸುವ ಮಾತು ಹಾಗಿರಲಿ, ಅವರನ್ನು ದ್ವೇಷಿಸುವ ಜನರೇ ಇಲ್ಲಿ ಹೆಚ್ಚು. ಹೀಗಾಗಿ ಚಾನಲ್‌ಗಳ ಮೂಲಕ ತಮಗಿಷ್ಟವಾಗಿದ್ದನ್ನೆಲ್ಲ ಕೊಡುತ್ತೇವೆ ಎಂದರೆ ತೆಗೆದುಕೊಳ್ಳಲು ಇಲ್ಲಿ ಯಾರೂ ಸಿದ್ಧರಿಲ್ಲ.

ಕಸ್ತೂರಿಯ ಕಥೆಯೇ ಜನಶ್ರೀಯಲ್ಲೇ ಆಗುವುದು ದಿಟ. ಅದರಲ್ಲಿ ಅನುಮಾನ ಪಡಬೇಕಾಗಿಲ್ಲ. ಹಾಗೆ ನೋಡಿದರೆ ಟಿವಿ ಪತ್ರಕರ್ತರಿಗೆ ಇರುವ ಆಯ್ಕೆಗಳಾದರೂ ಯಾವುವು? ಸಮಯ ಟಿವಿಯೂ ರಾಜಕಾರಣಿಯ ಮಾಲಿಕತ್ವದಲ್ಲೇ ಇದೆ. ಸುವರ್ಣ ಟಿವಿಯ ಮಾಲಿಕರೂ ಪಾರ್ಟ್ ಟೈಮ್ ರಾಜಕಾರಣಿಯೇ ಆಗಿದ್ದಾರೆ.

ಪತ್ರಕರ್ತರ ಮುಂದೆ ಆಯ್ಕೆಗಳು ಕಡಿಮೆ. ರಾಜಕಾರಣಿಗಳಲ್ಲದ ಮ್ಯಾನೇಜ್‌ಮೆಂಟುಗಳು ವ್ಯವಸ್ಥೆಯ ಆಮಿಷಕ್ಕೆ ಒಳಗಾಗಿ ಯಾವಾಗ ನೈತಿಕವಾಗಿ ಡಿನೋಟಿಫೈ ಆಗುತ್ತವೋ ಹೇಳಲು ಬರುವುದಿಲ್ಲ. ಮಾಧ್ಯಮರಂಗ ಇಂದು ಒಂದೋ ನೇರವಾಗಿ ರಾಜಕಾರಣಿಗಳ ಮಾಲಿಕತ್ವದಲ್ಲಿದೆ ಅಥವಾ ರಾಜಕಾರಣಿಗಳ ಪರೋಕ್ಷ ನಿಯಂತ್ರಣದಲ್ಲಿದೆ. ಈ ವ್ಯವಸ್ಥೆಯನ್ನು ಮೀರಿ ನಡೆಯುವ ಪತ್ರಕರ್ತರಿಗೆ ಸೋಡಾ ಚೀಟಿ ಸಿದ್ಧಪಡಿಸಿಕೊಂಡೇ ಇರಲಾಗುತ್ತದೆ.

ಹಿಂದೆ ಹಾಗಿರಲಿಲ್ಲ. ಒಂದು ಸಣ್ಣ ಉದಾಹರಣೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಪ್ಯಾಕರ್ ಒಬ್ಬನನ್ನು ಕೆಲಸದಿಂದ ತೆಗೆಯಲಾಗಿತ್ತು. ಪ್ಯಾಕರ್‌ಗಳು ಎಂದರೆ ಮುದ್ರಣವಾದ ಪತ್ರಿಕೆಗಳ ಬಂಡಲ್ ಕಟ್ಟುವವರು. ಈಗ ಮೆಷಿನ್ನುಗಳೇ ಈ ಕೆಲಸವನ್ನು ಮಾಡುತ್ತವೆ. ಹಿಂದೆ ಈ ಕೆಲಸಕ್ಕಾಗಿಯೇ ಒಂದು ಸೆಕ್ಷನ್ ಇರುತ್ತಿತ್ತು.

ಪ್ಯಾಕರ್ ಪರವಾಗಿ ಇಡೀ ಪತ್ರಿಕಾ ಸಿಬ್ಬಂದಿ ಮುಷ್ಕರ ಹೂಡಿತು. ಪತ್ರಿಕೆಯ ಪಾಲುದಾರರೊಬ್ಬರು ಸಿಟ್ಟಿಗೆದ್ದರು. ಅವರಿಗೆ ವಿಶೇಷವಾಗಿ ಪತ್ರಕರ್ತರ ಮೇಲೆ ಸಿಟ್ಟಿತ್ತು. ಪ್ಯಾಕರ್‌ಗಳ ಬೆಂಬಲಕ್ಕೆ ಪತ್ರಕರ್ತರು ನಿಂತಿದ್ದು ಅವರಿಗೆ ಸಹಿಸಲಾಗಲಿಲ್ಲ. ಈ ಜರ್ನಲಿಸ್ಟುಗಳು ಪ್ಯಾಕರ್‌ಗಳಾಗಲು ಲಾಯಕ್ಕು ಎಂದು ಅವರು ನಾಲಿಗೆ ಸಡಿಲಬಿಟ್ಟು ಮಾತನಾಡಿಬಿಟ್ಟರು. ಇದು ಎಲ್ಲರಿಗೂ ಗೊತ್ತಾಯಿತು. ಆಗ ಪತ್ರಿಕೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಏನೆಂದು ಗುಡುಗಿದರು ಗೊತ್ತೆ? ನಾವು ಪ್ಯಾಕರ್‌ಗಳಾಗಲು ತಯಾರು. ಹೆಮ್ಮೆಯಿಂದ ಆ ಕೆಲಸ ಮಾಡುತ್ತೇವೆ. ಆದರೆ ಈ ಮಾಲೀಕರು ಪ್ಯಾಕರ್‌ಗಳಾಗಲೂ ನಾಲಾಯಕ್.

ಹೀಗೆ ಮ್ಯಾನೇಜ್‌ಮೆಂಟ್‌ಗಳನ್ನು ಎದುರುಹಾಕಿಕೊಂಡು ಬದುಕುವ ಸಾಹಸವನ್ನು ಯಾರಾದರೂ ಪತ್ರಕರ್ತರು ಮಾಡಲು ಸಾಧ್ಯವೇ? ಕನಸಿನ ಮಾತು.

ಇಂಥ ಕಲುಷಿತ ವಾತಾವರಣದಲ್ಲಿ ಪತ್ರಕರ್ತರು ಯಾವ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಸಂಕೀರ್ಣ ಚರ್ಚೆಗೆ ಆಸ್ಪದ ಮಾಡಿಕೊಡುತ್ತದೆ.

ಪತ್ರಕರ್ತರು ಕಡೇ ಪಕ್ಷ ತಮ್ಮ ಆತ್ಮಗೌರವಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಿದರೆ ಸಾಕು, ಅಲ್ಲವೆ?

ಕೊನೆಕುಟುಕು: ಈಗಾಗಲೇ ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐನವರು ಜನಾರ್ಧನರೆಡ್ಡಿಯನ್ನು ಬಂಧಿಸಿದರೆ ಜನಶ್ರೀಯಲ್ಲಿ ಹೇಗೆ ಸುದ್ದಿ ಮಾಡಬಹುದು?
* ಜನಾರ್ಧನ ರೆಡ್ಡಿ ಅಕ್ರಮ ಬಂಧನ: ರಾಜ್ಯಾದ್ಯಂತ ರೊಚ್ಚಿಗೆದ್ದ ಜನತೆ
* ಶಂಕಿತ ಸಿಬಿಐ ಅಧಿಕಾರಿಗಳಿಂದ ದುಷ್ಕೃತ್ಯ
* ಸಿಬಿಐ ಅಧಿಕಾರಿಗಳಿಂದ ಜನಾರ್ಧನ ರೆಡ್ಡಿ ಅಪಹರಣ
* ಕಾಂಗ್ರೆಸ್ ಏಜೆಂಟ್ ಸಿಬಿಐನಿಂದ ಜನಾರ್ಧನ ರೆಡ್ಡಿ ವಿರುದ್ಧ ಪಿತೂರಿ
( ಅಥವಾ ಹೀಗೂ ಆಗಬಹುದು: ಸ್ಯಾಟಲೈಟ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಅಡಚಣೆಯಿಂದಾಗಿ ಇಂದು ಸುದ್ದಿ ವಾಹಿನಿ ಪ್ರಸಾರವಾಗುವುದಿಲ್ಲ.)
READ MORE - ಫ್ಲಾಷ್ ನ್ಯೂಸ್: ಅನಿತಾ ಕುಮಾರಸ್ವಾಮಿ ಮಧುಗಿರಿಗೆ ಭೇಟಿ!
ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ೧೫ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ನೈತಿಕ ಜವಾಬ್ದಾರಿ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕೆ ಎಂಬ ಪ್ರಶ್ನೆ ಇಟ್ಟುಕೊಂಡು ಈ ವಾರದ ಸಮೀಕ್ಷೆ ನಡೆಸಿದ್ದೆವು. ರಾಜೀನಾಮೆ ನೀಡಬೇಕು, ರಾಜೀನಾಮೆ ನೀಡಬಾರದು, ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂಬ ಮೂರು ಉತ್ತರಗಳನ್ನು ಆಯ್ಕೆಗೆ ನೀಡಲಾಗಿತ್ತು. ಈ ಸಮೀಕ್ಷೆಯಲ್ಲಿ ಮತ ಚಲಾಯಿಸಿದವರು ಒಟ್ಟು ೧೪೯ ಮಂದಿ. ಈ ಪೈಕಿ ೧೧೧ ಮಂದಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಮತ ಚಲಾಯಿಸಿದ್ದಾರೆ. ೩೬ ಮಂದಿ ರಾಜೀನಾಮೆ ನೀಡಬಾರದು ಎಂದಿದ್ದಾರೆ. ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದವರು ಇಬ್ಬರು ಮಾತ್ರ

ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದವರು ಶೇ.೭೪ರಷ್ಟು ಮಂದಿಯಾದರೆ, ಬೇಡ ಎಂದವರು ಶೇ.೨೪ರಷ್ಟು ಜನರು. ಇನ್ನು ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದವರು ಶೇ.೧ರಷ್ಟು ಮಾತ್ರ.

ಮತ ಚಲಾಯಿಸಿದ ಎಲ್ಲ ೧೪೯ ಓದುಗರಿಗೂ ಕೃತಜ್ಞತೆಗಳು.

ಮುಂದಿನ ಸಮೀಕ್ಷೆ ಪ್ರಜಾವಾಣಿ ಪತ್ರಿಕೆಯನ್ನು ಕುರಿತದ್ದಾಗಿದೆ. ಪ್ರಜಾವಾಣಿ ಕನ್ನಡದ ಶ್ರೇಷ್ಠ ದಿನಪತ್ರಿಕೆ. ಜಾತ್ಯತೀತ ಮೌಲ್ಯಗಳನ್ನು, ಧಾರ್ಮಿಕ ಸಹಿಷ್ಣುತೆಯನ್ನು ಎತ್ತಿಹಿಡಿಯುತ್ತಲೇ ಎಲ್ಲ ಸಾಮಾಜಿಕ ಅನಾಚಾರಗಳ ವಿರುದ್ಧವೂ ಧ್ವನಿಯೆತ್ತುತ್ತಲೇ ಬಂದ ಪತ್ರಿಕೆ. ಕನ್ನಡಿಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿರುವ ಪ್ರಜಾವಾಣಿ ಜನಪರ ಮೌಲ್ಯಗಳನ್ನು ಕಾಪಾಡಿಕೊಂಡೇ ಬಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಯಾಕೋ ಏನೋ ಪತ್ರಿಕೆಯ ಸಂಪಾದಕೀಯ ನೀತಿ ಕೊಂಚ ಸಡಿಲವಾದಂತೆ ಕಾಣುತ್ತಿದೆ. ಸಂಪಾದಕೀಯ ಬ್ಲಾಗ್‌ನಲ್ಲಿ ನಾವು ಸಾಕ್ಷಿ ಸಮೇತ ಈ ಅಂಶಗಳನ್ನು ಬಹಿರಂಗಪಡಿಸಿದ್ದೇವೆ.

ಪ್ರಜಾವಾಣಿ ತನ್ನ ಹಳೆಯ ಜನಪರ, ಪ್ರಗತಿಪರ, ಜೀವಪರ ಸಿದ್ಧಾಂತಗಳನ್ನೇ ಮುಂದುವರೆಸಬೇಕೆ? ಅಥವಾ ಬೇರೆ ಆದ್ಯತೆಗಳಿಗಾಗಿ ತಾನು ಕಾಪಾಡಿಕೊಂಡ ಮೌಲ್ಯಗಳನ್ನು ಬಿಟ್ಟು ಹೊಸ ನಿಲುವನ್ನು ತಾಳಬೇಕೆ? ಓದುಗರಿಗೆ ಬೇಕಾಗಿರುವುದು ಹಳೆಯ ಪ್ರಜಾವಾಣಿಯೋ? ಅಥವಾ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸರೂಪದ ಪ್ರಜಾವಾಣಿಯೋ?

ಅಷ್ಟಕ್ಕೂ ಪ್ರಜಾವಾಣಿ ಸಂಪಾದಕೀಯ ಧೋರಣೆ ಬದಲಾಗಿದೆ ಮತ್ತು ಆಳುವ ಸರ್ಕಾರದ ಪರವಾಗಿದೆ ಎಂದು ನಿಮಗನ್ನಿಸುತ್ತದೆಯೇ?

ಇದು ನಮ್ಮ ಪ್ರಶ್ನೆ.

ಹೌದು, ಇಲ್ಲ, ಗೊತ್ತಿಲ್ಲ ಎಂಬ ಮೂರು ಉತ್ತರಗಳು ನಿಮ್ಮ ಮುಂದೆ. ದಯಮಾಡಿ ಓಟ್ ಮಾಡಿ.
READ MORE - ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಅಂದವರು ಶೇ.೭೪ ಮಂದಿ

ಕೆ.ವಿ.ಅಕ್ಷರ ಬರೆದ ಹರಕೆ-ಹರಾಜು ಲೇಖನ ಅತಿ ಹೆಚ್ಚು ಚರ್ಚಿತವಾದ ಲೇಖನ. ಈಗಾಗಲೇ ಅಂತರ್ಜಾಲದಲ್ಲಿ ಚರ್ಚೆ ಸಾಕಷ್ಟು ವೇಗವಾಗಿ ನಡೆದಿದೆ. ಆದರೆ ಲೇಖನ ಪ್ರಕಟಗೊಂಡು ಎರಡು ವಾರವಾದರೂ ಪ್ರಜಾವಾಣಿಯಲ್ಲಿ ಯಾವುದೇ ಪ್ರತಿಕ್ರಿಯೆ ಪ್ರಕಟಗೊಂಡಿಲ್ಲ. ಬಹುಶಃ ನಾಳೆಯ ಸಾಪ್ತಾಹಿಕ ಪುರವಣಿಯಲ್ಲಿ ಒಂದಷ್ಟು ಚರ್ಚೆಯನ್ನು ನಿರೀಕ್ಷಿಸಬಹುದು. ಈ ನಡುವೆ ಪ್ರಸಿದ್ಧ ಚಿಂತಕ ಎಚ್.ಎಸ್.ಶಿವಪ್ರಕಾಶ್ ಬರೆದ ಪ್ರತಿಕ್ರಿಯೆ ಇಲ್ಲಿದೆ. ಈಗಾಗಲೇ ಇದು ಇ-ಮೇಲ್‌ಗಳಲ್ಲಿ ಹರಿದಾಡಿ ಒಂದಷ್ಟು ಜನರನ್ನು ತಲುಪಿದೆ, ಸಂಪಾದಕೀಯಕ್ಕೂ ಸಿಕ್ಕಿದೆ. ಶಿವಪ್ರಕಾಶ್ ಅವರ ಬರವಣಿಗೆ ಎಂದಿನಂತೆ ಸತ್ಯದ ಅನ್ವೇಷಿ, ಹೃದಯ ತಟ್ಟುವ, ಒಳಗಿನ ಅಂತಃಸಾಕ್ಷಿಯನ್ನು ಬಡಿದೆಚ್ಚರಿಸುವ ಅಕ್ಷರಲಹರಿ. ಸಂಪಾದಕೀಯದ ಓದುಗರಿಗಾಗಿ ಅದರ ಪೂರ್ಣಪಾಠ ಇಲ್ಲಿದೆ. ಓವರ್ ಟು ಶಿವಪ್ರಕಾಶ್...

ಹರಕೆ ಮತ್ತು ಹರಾಜಿನ ಬಗ್ಗೆ ಶ್ರೀ ಅಕ್ಷರ ಅವರು ಬರೆದ ಬರಹ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ.
ಅವರು ಒಂದು ರೂಪಕವಾಗಿ ಬಳಸಿರುವ ಚಿತ್ರ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ಒಬ್ಬ ಕೂತಿದ್ದಾನೆ, ಒಬ್ಬ ನಿಂತಿದ್ದಾನೆ, ಮತ್ತೊಬ್ಬ ನೋಡುತ್ತಿದ್ದಾನೆ. ನೋಡುವನು ಮಾನವಶಾಸ್ತ್ರಜ್ಞನಾಗಿದ್ದಾನೆ. ಅವನು ಬಹುಶಃ ಪಡುವಣ ನಾಡಿನವನಾಗಿದ್ದಾನೆ. ಕೂತವನು ಮೇಲು ಜಾತಿಯವನಂತಲೂ ನಿಂತವನು ಕೆಳಜಾತಿಯವನೆಂತಲೂ ಭಾವಿಸುತ್ತಾನೆ. ಇದು ಎಷ್ಟು ಸರಿ?  ನಿಂತವನು ತಾನೇ ಅದನ್ನು ಯಾಕೆ ಆಯ್ಕೆ ಮಾಡಿಕೊಂಡಿರಬಾರದು. ಹಾಗಿದ್ದರೆ ಅದು ಅವನ ವಿಶ್ವಾಸದ ಮಾತು. ಕೇಳುವುದಕ್ಕೆ ನಾವು ಯಾರು?

ಎಂಜಲೆಲೆ ಸೇವೆಯಂಥ ಅವಹೇಳನಕಾರಿಯಾದ ಆಚರಣೆಯನ್ನು ವಿಶ್ಲೇಷಿಸುವುದಕ್ಕೆ ಇದೊಂದು ಅತ್ಯಂತ ಸರಳೀಕೃತವಾದ ರೂಪಕವೆಂಬ ಸತ್ಯವನ್ನು ಬದಿಗೊತ್ತಿ  ಶ್ರೀ ಅಕ್ಷರ ಅವರ ದಾರಿಯನ್ನು ಹಿಡಿದು ಇನ್ನಷ್ಟು ಮುಂದೆಹೋಗಿ ಅದು ನಮ್ಮನ್ನು ಎಲ್ಲಿಗೆ ತಲುಪಿಸುತ್ತೆ, ನೋಡೋಣ.

ಹೀಗೆಂದು ಭಾವಿಸಿಕೊಳ್ಳಿ:
ಒಬ್ಬ ಹೆಂಗಸು ಸತಿ ಹೋಗುತ್ತಿದ್ದಾಳೆ. ಅವಳು ಈಗಾಗಲೇ ಚಿತೆಯ ಜ್ವಾಲೆಯೊಳಗೆ ಬಿದ್ದಿದ್ದಾಳೆ. ಸುತ್ತಾ  ಗಂಡಸರು ದೊಣ್ಣೆ ಹಿಡಿದುಕೊಂಡು ನಿಂತಿದ್ದಾರೆ. ಇದನ್ನು ಒಬ್ಬ ನೋಡುತ್ತಿದ್ದಾನೆ. ಅವನು ಒಬ್ಬ ಸಮಾಜಸುಧಾರಕನಾಗಿದ್ದಾನೆ. ಇದು ಮಹಿಳೆಯರ ವಿರುಧ್ಧ ಶೋಷಣೆ ಅಂತ ಭಾವಿಸಿದರೆ, ಅದೆಷ್ಟು ಸರಿ? ಸುತ್ತಾ ನಿಂತಿರುವ ದೊಣ್ಣೆನಾಯಕರು ಅವಳನ್ನು ಹೊರಗೆ ಜಿಗಿಯದಂತೆ ನೋಡಿಕೊಳ್ಳುತ್ತಿದ್ದಾರೆ ಅಂತ ಅವನು ಊಹಿಸಬಹುದು. ನಾವು ಹಾಗೆ ಯೋಚಿಸಬಾರದು. ಸತಿಹೋಗುವಾಗ ದೊಣ್ಣೆನಾಯಕರು ಹಾಗೆ ನಿಲ್ಲಬೇಕೆಂಬುದು ಒಂದು ಆಚರಣೆಯಿರಬಹುದು. ಆದರೆ ಆ ಹೆಂಗಸು ಕಿರುಚುವ ಹಾಗೆ ಕಾಣುತ್ತಿದೆಯಲ್ಲ? ಹಾಗೆ ಭಾವಿಸುವುದೂ ತಪ್ಪಿರಬಹುದು. ಪತಿಪರಮೇಶ್ವರನೊಂದಿಗೆ ಸ್ವರ್ಗಾರೋಹಣ ಸನ್ನಿಹಿತವಾಗುತ್ತಿರುವುದರಿಂದ ಅವಳು ಆನಂದತುಂದಿಲಳಾಗಿ ಹಾಗೆ ಕೂಗುತ್ತಿರಲಿಕ್ಕೂ ಸಾಕು. ಆದ್ದರಿಂದೇ ಅವಳೇ ಸ್ವಂತ ಇಚ್ಛೆಯಿಂದ ಸತಿ ಹೋಗುತ್ತಿದ್ದಾಳೆ ಅಂತ ಭಾವಿಸುವುದೇ ಸರಿ. ಇದನ್ನು ಶೋಷಣೆ ಎನ್ನುವುದು ಎರವಲು ತಂದ ಬುದ್ಧಿ, ಅವಳು ನಂಬುವುದನ್ನು ಕೇಳಲು ನಾವು ಯಾರು?

ಅಥವಾ ಜೋನ್ಸಟೌನ್ ದುರಂತವನ್ನು ಜ್ಞಾಪಿಸಿಕೊಳ್ಳಿ:
ದಕ್ಷಿಣ ಅಮರಿಕದ ಡೋಂಗಿ ಗುರು ಜಿಮ್ ಜೋನ್ಸನ ಆದೇಶದ ಮೇರೆಗೆ ನೂರಾರು ಜನ ಅನುಯಾಯಿಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡು ಸತ್ತುಬಿದ್ದಿದ್ದಾರೆ. ಅದರಲ್ಲಿ ಹೆಂಗಸರು, ಮಕ್ಕಳು, ಮುದುಕರೂ ಇದ್ದಾರೆ. ಈ ಚಿತ್ರವನ್ನು ಒಬ್ಬ ನೋಡುತ್ತಿದ್ದಾನೆ. ಅವನು ಒಬ್ಬ ವಿಚಾರವಾದಿ ಎಂದುಕೊಳ್ಳಿ. ಈ ದುರಂತವನ್ನು ಮೂಢನಂಬಿಕೆಯ ಫಲವೆಂದು ಅವನು ಭಾವಿಸಿದರೆ ಅದೆಷ್ಟು ಸರಿ? ಆ ಸಾಮೂಹಿಕ ಆತ್ಮಹತ್ಯೆ ಅವರ ಆಯ್ಕೆ. ಆ ಮಕ್ಕಳು ಕೂಢ ಈ ಭಯಾನಕ ಆತ್ಮಹತ್ಯೆಯನ್ನು ಖುಷಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಇದು ದುರಂತವೇನಲ್ಲ. ಒಂದು ಧೀರೋದಾತ್ತ ಆಚರಣೆ. ಅವರೆಲ್ಲರೂ ತಾವಾಗಿಯೇ ಸಾವನ್ನಪ್ಪಿಕೊಂಡಿರುವುದರಿಂದ  ಅದನ್ನು ಖಂಡಿಸಲು ನಾವು ಯಾರು?

ಅಥವಾ ಕ್ರಾಂತಿ ಪೂರ್ವ  ಚೀಣಾದ ಒಂದು ಆಚರಣೆಯನ್ನು ಚಿತ್ರಿಸಿಕೊಳ್ಳಿ;
ವರ್ಷಕ್ಕೊಂದು ಸಲ ಅಲ್ಲಿನ ಚಕ್ರವರ್ತಿ ಬೀರ್ಜಿಂಗ್  ತನ್ನ ಭವ್ಯ ಅರಮನೆಯ ಮುಂದೆ ದೇಶದ ರೈತರಿಗೆ ದಿವ್ಯದರ್ಶನ ಕೊಡುತ್ತಾನೆ. ಆವತ್ತು ನೂರಾರು ಜನ ರೈತರು ತಮ್ಮ ಶಿಷ್ಣಗಳನ್ನು ಕಚಕ್ಕನೆ ಕತ್ತರಿಸಿಕೊಂಡು ತಮ್ಮ ನಾಯಕನಿಗೆ ಅರ್ಪಣೆ ಮಾಡುತ್ತಾರೆ. ಈ ಆಚರಣೆಯಿಂದ ನಾಯಕನ ವೀರ್ಯಶಕ್ತಿ ಹೆಚ್ಚಿ ನಾಡಿಗೆ ಒಳಿತಾಗುವುದೆಂದು ಅವರು ನಂಬುತ್ತಾರೆ. ಇದನ್ನು ಅಮಾನವೀಯ ಆಚರಣೆ ಅನ್ನುವದಕ್ಕೆ ನಾವು ಯಾರು? ಇದೂ ಅವರ ನಂಬಿಕೆಯಲ್ಲವೆ?

ಅಥವಾ ಅಕ್ಷರ ಅವರೇ ಖಂಡಿಸಿರುವ ಐಪಿಎಲ್ ಹರಾಜಿನ ಚಿತ್ರವನ್ನು ಹೀಗೆ ಭಾವಿಸಿಕೊಳ್ಳಿ:
ಹರಾಜು ಮಾಡಿಕೊಂಡ ಕ್ರಿಕೆಟಿಗರು ತಮ್ಮ ಕೊರಳಿಗೆ ತಾವು ಪಡೆದ ಬೆಲೆಯ ಫಲಕಗಳನ್ನು ಹಾಕಿಕೊಂಡು, ಟಿ ವಿ ಕ್ಯಾಮರಾಗಳ ಮುಂದೆ ಪೋಜು ಕೊಡುತ್ತಿದ್ದಾರೆ. ಅಭಿಮಾನಿಗಳು ಅವರನ್ನು ಅಭಿನಂದಿಸುತ್ತಿದ್ದಾರೆ. ಇದನ್ನು ಖಂಡಿಸಲು ನಾವು ಯಾರು? ಆ ಫಲಕಗಳು ಹೆಮ್ಮೆಯ ಸಂಕೇತಗಳೆಂದು ಅವರು ತಿಳಿದಿರಬಹುದಲ್ಲವೆ? ಅವರ ಪ್ಯಾನ್ಗಳೂ ಹಾಗೇ ತಿಳಿದಿದ್ದಾರೆ. ಆ ಸಮಾರಂಭದ ಶೋಭೆಯನ್ನು ಹೆಚ್ಚಿಸಲು ಬಂದ ಶಿಲ್ಪಾ ಶೆಟ್ಟಿ, ವಿಜಯ ಮಲ್ಯ ಅವರೂ ಹಾಗೇ ತಿಳಿದಿದ್ದಾರೆ. ಇದೇನು ಬೈಲಹೊಂಗಲದ ದನದ ಜಾತ್ರೆಯ ಥರದ ಹರಾಜಲ್ಲ. ಸ್ವಂತ ಇಚ್ಛೆಯಿಂದ ಕ್ರಿಕೆಟಿಗರು ತಮ್ಮ ಕ್ರಯವನ್ನು ಪಡೆದುಕೊಂಡಿದ್ದಾರೆ. ಇದು ಮನಮೋಹನ ಯುಗದ, ಯಡಿಯೂರಪ್ಪ ಯುಗದ ಎಲ್ಲ ಭಾರತೀಯರು, ವಿಶೇಷವಾಗಿ ಮುಕ್ಕೋಟಿ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ.

ಹೀಗಾಗಿ ಮೇಲ್ಕಾಣಿಸಿದ ಯಾವ ಚಿತ್ರಗಳೂ ಖಂಡನೀಯವಲ್ಲ. ನಾವು ಅಪಮಾನ, ಖಂಡನೀಯ ಅಂತ ತಪ್ಪಾಗಿ ಭಾವಿಸುವುದಕ್ಕೆ ಗುರಿಯಾದ ಆ ಎಲ್ಲರೂ ನಮ್ಮ ಮೆಚ್ಚುಗೆಗೆ ಪಾತ್ರರು.
ಹೀಗೇ ಮುಂದುವರಿಯೋಣ. ದಲಿತರಿಗೆ ಮಲ ತಿನ್ನಿಸಿದ ಘಟನೆಯನ್ನೂ ನಾವು ಖಂಡಿಸಬೇಕಿಲ್ಲ. ಪರಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಕ್ಕೆ ಒಬ್ಬ ಹುಡುಗಿಯನ್ನು ಮನೆಯವರು ಕೊಲೆ ಮಾಡಿದ ಘಟನೆಯನ್ನೂ ಖಂಡಿಸಬಾರದು. ಕೊಂದವರ ನಂಬಿಕೆಗಳನ್ನೂ ನಾವು ಗೌರವಿಸೋಣ. ಎಳೇ ಹುಡುಗಿಯನ್ನು ನರಬಲಿ ಕೊಟ್ಟವರನ್ನೂ ಬೈಯಬಾರದು. ಯಾಕಂದರೆ ಹುಡುಗಿ ಸ್ವರ್ಗಕ್ಕೆ ಹೋಗಿ ಸುಖವಾಗಿರುತ್ತಾಳೆ. ಹಳ್ಳಿಯಿಂದ ದಿಲ್ಲಿಯವರೆಗೆ ನಡೆಯುವ ಕೊಲೆಗಳು, ಮಾನಭಂಗಗಳು, ಹಲ್ಲೆಗಳು, ಶೋಷಣೆಯ ನಾನಾ ರೂಪಗಳು, ಎಮ್‌ಎಲ್‌ಎ, ಎಮ್‌ಪಿಗಳ ಹರಾಜು ಎಲ್ಲವೂ ಸಮರ್ಥನೀಯ.

ಕೊನೆಯದಾಗಿ ಇನ್ನೊಂದು ಚಿತ್ರ:
ಹೋತವೊಂದನ್ನು ಯಜ್ಞದಲ್ಲಿ ಬಲಿಕೊಡಲು ಕೊಂಡೊಯ್ಯುತ್ತಿದ್ದಾರೆ. ಅದನ್ನು ಬಸವಣ್ಣ ದೂರದಿಂದ ನೋಡುತ್ತಿದ್ದಾನೆ. ಅದನ್ನು ನೋಡಿ ಮರುಗತೊಡಗುತ್ತಾನೆ. ವೇದವನೋದಿದವರ ಮುಂದೆ ಅಳು ಕಂಡೆಯಾ ಹೋತೆ ಅನ್ನುತಿದ್ದಾನೆ. ಹೀಗೆನ್ನಲು ಅವನಿಗೇನು ಅಧಿಕಾರ? ಬಲಿಕೊಡವವರ ನಂಬಿಕೆಗಳನ್ನು ಅವನೇಕೆ ಅರ್ಥ ಮಾಡಕೊಳ್ಳುತ್ತಿಲ್ಲ? ಆ ಕುರಿಗೂ ಬೇಜಾರಿಲ್ಲ. ಅಗೋ ನೋಡಿ, ಅದು ತೋರಣದ ತಳಿರನ್ನು ತಿನ್ನುತ್ತಾ ನಿಂತಿದೆ. ಹೀಗೆ ಬಲಿಯ ಅಗತ್ಯವನ್ನು ಮೌನವಾಗಿ ಒಪ್ಪಿಕೊಂಡಿರುವ ಕುರಿಗೆ ನಾವೇಕೆ ವಕೀಲರಾಗಬೇಕು? ಅಥವಾ ಆ ಬಸವಣ್ಣ ಕೂಡ ಒಬ್ಬ ಮಾನವಶಾಸ್ತ್ರ್ರಜ್ಞನಾಗಿರಬಾರದೇಕೆ?

ಹೀಗೆ ಅಕ್ಷರ ಅವರ ದಾರಿಯನ್ನು ಹಿಡಿದು ನಾವು ಇಲ್ಲಿತನಕ ಬಂದಮೇಲೆ  ಮಾನವಮುಕ್ತಿ ಯಜ್ಞಗಳ ಅಗ್ನಿ ಚರಿತ್ರೆಗಳಿಗೆ ವಿದಾಯ ಹೇಳಿಬಿಡೋಣ. ಕತ್ತಲಿನಿಂದ ಬೆಳಕಿಗೆ, ಪಾರತಂತ್ರದಿಂದ ಸ್ವಾತಂತ್ರ್ಯದ ಕಡೆ ಕೊಂಡೊಯ್ಯುವ ಹಾದಿಗಳನ್ನೇ ಅಳಿಸಿಬಿಡೋಣ.

ಸೂಫಿಗಳ  ಒಂದು ಸೂಕ್ತಿ:
ಬೈಯಬೇಕಾದ್ದು ಬಾಣವನ್ನಲ್ಲ, ಬಾಣಬಿಟ್ಟವನನ್ನು. ಅ ಬಾಣ ಬಿಡಿಸಿದವನೂ ಇನ್ನೊಬ್ಬನಿರಬೇಕು.
ಅಕ್ಷರ ಬಾಣವಾಗಿದ್ದಾರೆಯೇ ಹೊರತು ಬಾಣ ಬಿಟ್ಟಿಲ್ಲ, ಬಿಡಿಸಿಲ್ಲ.
ಬನ್ನಿ, ಬಾಣವನ್ನು ಬಾಣದ ಪಾಡಿಗೆ ಬಿಟ್ಟು ಬಾಣ ಬಿಟ್ಟವರನ್ನು ಮತ್ತು ಬಿಡಿಸಿದವರನ್ನು ತರಾಟೆಗೆ ತೆಗೆದುಕೊಳ್ಳೋಣ.
ಮಾನವಶಾಸ್ತ್ರ್ರಜ್ಞರ ಕ್ಯಾಮರಾಕ್ಕೆ ಕಣ್ಣಿದೆ, ಕರುಳಿಲ್ಲ. ಹಾಗೆಯೇ ಕೂತುಕೊಂಡಿರುವನ ವಕೀಲರಿಗೆ ಬುದ್ಧಿಯಿದೆ, ಹೃದಯವಿಲ್ಲ.
ನೊಂದವರ ನೋವೇ ಬೇರೆ. ಅದ ಕಂಡು ಮರುಗಿದವರ ಮರುಕವಾಗಲಿ, ಕೆರಳಿದವರ  ಸಿಟ್ಟಾಗಲಿ ಆ ವಕೀಲನಿಗಿಲ್ಲ. ಅವನಲ್ಲಿರುವುದು ನೋಯದವರ ನಿರಂಬಳತೆ ಮಾತ್ರ; ನೋವನ್ನೇ ಇಲ್ಲವೆನ್ನಿಸುವ ಘಾತುಕ ಚತುರತೆ ಮಾತ್ರ.

READ MORE - ನೊಂದವರ ನೋವು, ನೋಯದವರ ನಿರಂಬಳತೆ
ನಿಗದಿಗಿಂತ ಎರಡೂವರೆ ಗಂಟೆ ತಡವಾಗಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಶ್ರೀರಾಮುಲು ಹಂಪಿಯ ಪೇಟ ತೊಡಿಸಿ, ವಿಜಯ ಖಡ್ಗವನ್ನು ನೀಡುತ್ತಿದ್ದಂತೆಯೇ, ಒಂದು ಕ್ಷಣ ಯಡಿಯೂರಪ್ಪ ಅವರೂ, ವೀರಯೋಧನೂ ಆಗಿ, ಗಂಡರಗಂಡ, ವೀರರಮಣ ಎಂದೇ ಕರೆಯಿಸಿಕೊಂಡಿದ್ದ ಕೃಷ್ಣದೇವರಾಯನಂತೆ ಕಂಗೊಳಿಸಿದರು...


ಇವತ್ತಿನ ಪ್ರಜಾವಾಣಿಯ ರಾಜ್ಯ-ರಾಷ್ಟ್ರೀಯ ಪುಟದ (ಪುಟ-೮ಬಿ) ಬೆರಗು ಮೂಡಿಸಿದ ಹಂಪಿ ಉತ್ಸವದ ಬೆಡಗು ಎಂಬ ವರದಿಯ ಸಾಲುಗಳು ಇವು.

ವರದಿಗಾರಿಕೆಯ ಪ್ರಾಥಮಿಕ ಪಾಠಗಳನ್ನು ಕಲಿತ ಟ್ರೈನಿಗಳೂ ಕೂಡ ಬರೆಯದಂಥ ವಾಕ್ಯಗಳನ್ನು ಸಿದ್ಧಯ್ಯ ಹಿರೇಮಠ ಬರೆದಿದ್ದಾರೆ. ಅದನ್ನು ಪ್ರಕಟಿಸಿ, ಪ್ರಜಾವಾಣಿ ಪಾವನವಾಗಿದೆ.

ಈ ವರದಿಗಾರನಿಗೆ ಯಡಿಯೂರಪ್ಪ ಕೃಷ್ಣದೇವರಾಯನಂತೆ ಕಂಡಿರಬಹುದು, ಹೀಗೆ ಕಾಣಿಸುವುದಕ್ಕೂ ಅವರವರದ್ದೇ ಆದ ಕಾರಣಗಳಿರುತ್ತದೆ. ಆ ಕುರಿತು ನಮ್ಮ ಆಕ್ಷೇಪಣೆಗಳೇನೂ ಇಲ್ಲ.

ಆದರೆ ಇಂಥ ಕಾಲ್ಪನಿಕ, ಉತ್ಪ್ರೇಕ್ಷಿತ ಉಪಮೆಗಳನ್ನು ಪತ್ರಿಕಾ ವರದಿಗಾರ ಬರೆಯಕೂಡದು ಎಂಬ ಪ್ರಾಥಮಿಕ ಪಾಠವನ್ನು ಅವರಿಗೆ ಯಾರೂ ಹೇಳಿಕೊಡಲಿಲ್ಲವೆ? ತಮ್ಮ ವರದಿಗಾರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸುವ, ನಂತರ ತಿಂಗಳುಗಟ್ಟಲೆ ತರಬೇತಿ ನೀಡುವ ಪ್ರಜಾವಾಣಿಯ ಹಿರಿಯ ತಲೆಗಳಾದರೂ ಅವರಿಗೆ ಇದನ್ನು ಹೇಳಿಕೊಟ್ಟಿರಲಿಲ್ಲವೇ?

ಪ್ರಜಾವಾಣಿಯಲ್ಲಿ ನಡೆಯುತ್ತಿರುವ ವಿಚಿತ್ರಗಳನ್ನು ಗಮನಿಸಿ. ಇಲ್ಲಿ ಒಬ್ಬ ಅಂಕಣಕಾರ ವರದಿ ಬರೆದಂತೆ ಅಂಕಣ ಬರೆಯುತ್ತಾರೆ, ವರದಿಗಾರ ವರದಿಯನ್ನು ಆಸ್ಥಾನಕವಿಯಂತೆ ಬರೆಯುತ್ತಾನೆ.

ವರದಿಗಾರನಿಗೆ ಯಡಿಯೂರಪ್ಪ ಸಾಕ್ಷಾತ್ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸಿದಂತೆ, ಜನಾರ್ದನರೆಡ್ಡಿ ಸಾಕ್ಷಾತ್ ಮದಕರಿ ನಾಯಕನಂತೆಯೂ, ಶ್ರೀರಾಮುಲು ಸಂಗೊಳ್ಳಿ ರಾಯಣ್ಣನಂತೆಯೂ ಕಾಣಿಸಿರಬಹುದು. ಆದರೆ ಅದನ್ನೂ ಆತ ಬರೆಯದೆ ಇರುವುದು ಓದುಗರಾದ ನಮ್ಮ ಭಾಗ್ಯ, ಪ್ರಜಾವಾಣಿಯ ಪುಣ್ಯ.

ಹಿಂದೆ ಜನಾರ್ದನರೆಡ್ಡಿ ಯಡಿಯೂರಪ್ಪನವರನ್ನು ಕೃಷ್ಣದೇವರಾಯನ ಅಪರಾವತಾರ ಎಂದು ಹೊಗಳಿದ್ದರು. ನಂತರ ಮುದುಕ-ಕಂಸ ಇತ್ಯಾದಿ ಬೈಗುಳಗಳೂ ಅವರ ಬಾಯಿಂದಲೇ ಬಂದವು. ರಾಜಕಾರಣಿಗಳು ಪರಸ್ಪರರನ್ನು ಹೀಗೆ ಅಸಹ್ಯವಾಗಿ ಹೊಗಳುವುದು, ತೆಗಳುವುದು ಮಾಮೂಲು. ಆದರೆ ಪತ್ರಿಕಾ ವರದಿಗಾರರಿಗೆ ಮುಖ್ಯಮಂತ್ರಿಗಳೋ ಇನ್ನ್ಯಾರೋ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸುವುದನ್ನು ಹೇಗೆ ಸ್ವೀಕರಿಸುವುದು? ಹೈಪ್ರೊಫೈಲ್ ಪತ್ರಕರ್ತರೇ ತುಂಬಿರುವ ಎಂಜಿ ರಸ್ತೆಯ ಕಚೇರಿಯಲ್ಲಿ ಈ ಕುರಿತು ಒಂಚೂರು ಚರ್ಚೆ ನಡೆಯಬಾರದೇ?

ಪ್ರಜಾವಾಣಿಯ ಇನ್ನೊಂದು ವರದಿಯನ್ನು ಗಮನಿಸಿ: ಹಂಪಿ ಉತ್ಸವ: ಗಮನ ಸೆಳೆದ ಶೋಭಾಯಾತ್ರೆ. ಇಲ್ಲಿ ಶೋಭಾಯಾತ್ರೆ ಅಂದರೆ ಏನು? ಈ ಪದವನ್ನು ಯಾರು, ಯಾಕೆ ಬಳಸುತ್ತಾ ಬಂದಿದ್ದಾರೆ? ಸರ್ಕಾರ ನಡೆಸುವ ಕಾರ್ಯಕ್ರಮಗಳ ಮೆರವಣಿಗೆಗೂ ಶೋಭಾಯಾತ್ರೆ ಎಂದು ಕರೆಯುವ ಪರಿಪಾಠ ಯಾವಾಗ ಆರಂಭವಾಯಿತು?

ಕೊನೆ ಕುಟುಕು: ಮೊನ್ನೆ ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮದ ಎರಡು ಸಂಪುಟಗಳು ಬಿಡುಗಡೆಯಾದವು. ಪ್ರಜಾವಾಣಿಯಲ್ಲಿ ಈ ಕುರಿತ ವರದಿಯೂ ಪ್ರಕಟವಾಯಿತು. ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲಿ ತಮ್ಮ ಸಹಸಂಪಾದಕರು ಸಾಕ್ಷಾತ್ ಶೇಕ್ಸ್‌ಪಿಯರ್‌ನಂತೆ ಕಾಣಿಸಿದರು ಎಂದು ವರದಿಗಾರ ಬರೆಯಲಿಲ್ಲ, ಥ್ಯಾಂಕ್ ಗಾಡ್!

READ MORE - ಪ್ರಜಾವಾಣಿ ಕಣ್ಣಲ್ಲಿ ಯಡಿಯೂರಪ್ಪನವರೇ ಕೃಷ್ಣದೇವರಾಯ!

ಇಂಡಿಪೆಂಡೆನ್ಸ್ ಡೇ ಮುಗೀತು, ದಸರಾ ಬಂದು ಹೋಯ್ತು, ರಾಜ್ಯೋತ್ಸವವೂ ಆಯ್ತು, ದೀಪಾವಳಿಯೂ ಉರಿದು ಹೋಯ್ತು. ಉಳಿದಿದ್ದು ನ್ಯೂ ಇಯರ್, ನಂತರ ಸಂಕ್ರಾಂತಿ ಎಲ್ಲವೂ ಆಗಿ ಹೋದವು. ಚಾನೆಲ್ ಮಾತ್ರ ಶುರುವಾಗಲಿಲ್ಲ.
ಇದು ಜನಾರ್ದನ ರೆಡ್ಡಿ-ಶ್ರೀರಾಮುಲು ಅವರ ಜನಶ್ರೀ ಕಥೆ. ಜನಶ್ರೀ ಹೆಸರಿನಲ್ಲೇ ಜನಾರ್ದನ ರೆಡ್ಡಿ, ಶ್ರೀರಾಮುಲು ಇಬ್ಬರೂ ಇದ್ದಾರೆ. ಇಬ್ಬರೂ ಸದ್ಯದ ಕರ್ನಾಟಕ ರಾಜಕಾರಣದಲ್ಲಿ, ಉದ್ಯಮದಲ್ಲಿ ಓಡುತ್ತಿರುವ ಕುದುರೆಗಳು. ರೆಡ್ಡಿಗಳು ಕಳೆದ ಕೆಲವು ವರ್ಷಗಳಲ್ಲಿ ಕೈ ಇಟ್ಟಿದ್ದೆಲ್ಲ ಚಿನ್ನ.

ಆದರೆ ನಸೀಬು ಒಂದೇ ತರ ಇರಲ್ಲ ನೋಡಿ. ಸದ್ಯಕ್ಕೆ ಅವರ ಟೈಮು ಸರಿ ಇದ್ದಂತೆ ಕಾಣುತ್ತಿಲ್ಲ. ಒಂದೆಡೆ ಕರ್ನಾಟಕದ ಬಿಜೆಪಿ ಸರ್ಕಾರವೇ ಈಗಲೋ ಆಗಲೋ ನೆಗೆದುಬೀಳುವಂತಿದೆ. ಆಂಧ್ರದಲ್ಲಿ ರೆಡ್ಡಿಗಳಿಗೆ ಗಾಡ್‌ಫಾದರ್‌ನಂತಿದ್ದ ವೈಎಸ್‌ಆರ್ ಹೆಲಿಕಾಪ್ಟರಿನ ಸಮೇತ ಸುಟ್ಟುಹೋದರು; ಜೊತೆಜೊತೆಗೆ ರೆಡ್ಡಿಗಳ ರಾಜಕೀಯ ಮಹತ್ವಾಕಾಂಕ್ಷೆಗಳೂ ಭಸ್ಮವಾಗುತ್ತಿವೆ.  ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆ ಆಂಧ್ರಸೀಮೆಯಿಂದ ಶುರುವಾಗಿ ರೆಡ್ಡಿಗಳ ಮನೆ ಬಾಗಿಲಿಗೆ ಬಂದು ನಿಂತಿದೆ. ರೆಡ್ಡಿಗಳ ಫ್ರೆಂಡು, ಪಾರ್ಟನರ್ ವೈಎಸ್‌ಆರ್ ಪುತ್ರ ಜಗನ್ ಕಾಂಗ್ರೆಸ್‌ನಿಂದ ಹೊರಬಿದ್ದು ಹೊಸಪಾರ್ಟಿ ಕಟ್ಟುವ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ.

ರಾಜಕೀಯವಾಗಿಯೂ ರೆಡ್ಡಿಗಳು ಸ್ವತಃ ಬಳ್ಳಾರಿಯಲ್ಲೇ ಏಟು ತಿಂದಿದ್ದಾರೆ. ಜಿಪಂ ಚುನಾವಣೆಗಳಲ್ಲಿ ರೆಡ್ಡಿಗಳಿಗೆ ಸರಿಯಾದ ಹೊಡೆತವೇ ಬಿದ್ದಿದೆ. ಹಾಗೂ ಹೀಗೂ ಆಪರೇಷನ್ ಕಮಲ ಮಾಡಿ ಗದ್ದುಗೆ ಹಿಡಿದರೂ, ರೆಡ್ಡಿಗಳ ಪಾಲಿಗೆ ಈ ಹಿಂಬಾಗಿಲ ಜಯ, ಜಯವಲ್ಲ.

ಹೀಗಿರುವಾಗ ಚಾನೆಲ್ ಕಥೆ ಏನಾಯ್ತು ಎಂದರೆ ಜನಶ್ರೀಯಲ್ಲಿ ಸೇರಿಕೊಂಡಿರುವ ಪತ್ರಕರ್ತರ ಮುಖಗಳಲ್ಲಿ ನಿಸ್ತೇಜ ಕಳೆ. ಮೊದಮೊದಲು ದಸರಾಗೆ ಶುರು, ದೀಪಾವಳಿಗೆ ಸಿಡಿತೀವಿ ನೋಡಿ, ಸಂಕ್ರಾಂತಿ ಎಳ್ಳುಬೆಲ್ಲದೊಂದಿಗೆ ಬರ‍್ತೀವಿ ಎನ್ನುತ್ತಿದ್ದ ಹುಡುಗ-ಹುಡುಗಿಯರು ಈಗೀಗ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ ಕಣ್ರೀ ಎಂದು ನಿರುತ್ಸಾಹದಿಂದ ಗೊಣಗುತ್ತಿದ್ದಾರೆ.
ಇನ್ನೂ ಚಾನೆಲ್ ಅಪ್ರೂವಲ್ ಆಗಿಲ್ಲ, ಸ್ಯಾಟಲೈಟ್‌ದು ಏನೇನೋ ಪ್ರಾಬ್ಲಮ್ಮು, ಸೆಂಟ್ರಲ್ ಗವರ್ಮೆಂಟು ಬೇಕಂತ ಆಟ ಆಡಿಸ್ತಾ ಇದೆ... ಇತ್ಯಾದಿ ಇತ್ಯಾದಿ ಕಪೋಲಕಲ್ಪಿತ ಮಾತುಗಳು ಚಾನೆಲ್ ಹುಡುಗರಲ್ಲೇ ವಿನಿಮಯವಾಗುತ್ತಿದೆ.

ಸದ್ಯಕ್ಕೆ ಜನಶ್ರೀಯಲ್ಲಿ ಅನಂತ ಚಿನಿವಾರ್ ಬಾಸ್. ಚಿನಿವಾರ್ ಪ್ರತಿಭಾವಂತ ಪತ್ರಕರ್ತ, ಸೂಕ್ಷ್ಮಮತಿ. ಆದರೆ ಇಷ್ಟು ದೊಡ್ಡ ಟೀಮನ್ನು ನಿಯಂತ್ರಿಸುವುದು ಅವರಿಂದ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಚಿನಿವಾರ್ ಹಿಂದೆ ತಮ್ಮ ಟೀಮಿನೊಂದಿಗೆ ರಾಜ್ ನ್ಯೂಸ್ ಎಂಬ ಶುರುವಾಗದ ಚಾನೆಲ್‌ಗೆ ಹೋಗಿ ಪಟ್ಟಪಾಡು ದೇವರಿಗೇ ಪ್ರೀತಿ. ಕಡೆಗೆ ಚಿನಿವಾರ್ ತಂಡ ಸಂಬಳಕ್ಕೂ ಜಗಳವಾಡಿ ಅಲ್ಲಿಂದ ಹೊರಬರಬೇಕಾಯಿತು.

ಜನಶ್ರೀಯಲ್ಲಿ ಸಂಬಳಕ್ಕೇನು ಕೊರತೆಯಿಲ್ಲ. ಇಲ್ಲಿ ಆಫರ್ ಮಾಡಲಾದ ಸಂಬಳವನ್ನು ನೆಚ್ಚಿಕೊಂಡೇ ಟಿವಿ೯, ಈಟಿವಿಯಿಂದ ಸಾಕಷ್ಟು ಮಂದಿ ಸಾಲುಮೇರೆ ವಲಸೆ ಬಂದಿದ್ದಾರೆ. ಇತ್ತೀಚಿಗಷ್ಟೆ ಸುವರ್ಣ ನ್ಯೂಸ್‌ನಿಂದ ಹೊರಗೆ ಬಂದಿರುವ ರಂಗನಾಥ ಭಾರದ್ವಾಜ್ ಕೂಡ ಜನಶ್ರೀಗೆ ಸೇರಿಕೊಳ್ಳುವ ಸಾಧ್ಯತೆಯಿದೆ. ಇದೆಲ್ಲ ಸರಿ. ಆದರೆ ಎಷ್ಟು ದಿನ ಟ್ರಯಲ್ ಪ್ರೋಗ್ರಾಮ್ ಮಾಡೋದು? ಯಾರೂ ನೋಡದ ಸುದ್ದಿಯನ್ನು ಎಷ್ಟು ದಿನ ಓದೋದು? ಕಾರ್ಯಕ್ರಮಗಳು, ಪ್ರೆಸ್‌ಮೀಟುಗಳಿಗೆ ಲೋಗೋ ಹಿಡಿದು ಹೋಗುವ ಹುಡುಗರನ್ನು ಜನರು ವಿಚಿತ್ರವಾಗಿ ನೋಡ್ತಾರಲ್ಲವೆ?

ಪತ್ರಕರ್ತರು ಗುಮಾಸ್ತರ ಥರ ಅಲ್ಲ. ಅದರಲ್ಲೂ ಟಿವಿ ಪತ್ರಕರ್ತರು ಇವತ್ತು ಸ್ಟಾರ್ ವ್ಯಾಲ್ಯೂ ಇರುವವರು. ಜನರನ್ನು ತಲುಪದೇ ಹೋದರೆ ಅವರು ಎಷ್ಟೇ ದುಡ್ಡು ಕೊಟ್ರೂ ಕೆಲಸ ಮಾಡುವವರಲ್ಲ. ಕೆಲಸ ಮಾಡಿದರೂ ವೃತ್ತಿಯೆಡೆಗಿನ ಪ್ಯಾಷನ್ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.

ಜನಶ್ರೀ ಬೇಗ ಶುರುವಾಗಲಿ, ಅಲ್ಲಿರುವ ಹುಡುಗ-ಹುಡುಗಿಯರ ಮೊಗದಲ್ಲಿ ಮಂದಹಾಸ ಮೂಡಲಿ.


ಮರೆತಿದ್ದ ಮಾತು: ಪತ್ರಕರ್ತರು ಜನರನ್ನು ತಲುಪದೇ ಹೋದರೆ ಕಂಗಾಲಾಗಿ ಹೋಗಿಬಿಡುತ್ತಾರೆ ಎಂದೆವಲ್ಲ. ಅದಕ್ಕೆ ವಿಜಯ ಕರ್ನಾಟಕದಿಂದ ಹೊರಬಂದ ಪ್ರತಾಪಸಿಂಹ ಉದಾಹರಣೆ. ಲಾಲ್‌ಚೌಕದ ವಿದ್ಯಮಾನ, ಜಿಲ್ಲಾಧಿಕಾರಿ ಜೀವಂತ ದಹನ... ಇತ್ಯಾದಿ ಇತ್ಯಾದಿ ಘಟನೆಗಳೆಲ್ಲ ನಡೆಯುತ್ತಿರುವಾಗ ನಂಗೆ ಬರೆಯಲು ಕಾಲಂ ಇಲ್ಲ. ನಾನು ಹುಚ್ಚನಾಗುತ್ತಿದ್ದೇನೆ ಎಂಬ ಪ್ರಾಮಾಣಿಕ ಅನಿಸಿಕೆಯನ್ನು ಪ್ರತಾಪಸಿಂಹ ತಮ್ಮ ಫೇಸ್‌ಬುಕ್ ಗೋಡೆಗೆ ಅಂಟಿಸಿದ್ದಾನೆ. ೧೦ನೇ ತಾರೀಖಿನವರೆಗೆ ತಡೆದುಕೋ, ನಿಂಗೊಂದು ಕಾಲಂ ಸಿಗುತ್ತೆ ಎಂದು ಭಟ್ಟರು ಸಮಾಧಾನಪಡಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಒಂದು ಹುಚ್ಚರಾಸ್ಪತ್ರ್ರೆ ನಾನು ಕಟ್ಟಿಸಿಕೊಡಲೇ ಎನ್ನುತ್ತ ರವಿ ಬೆಳಗೆರೆ ಮೀಸೆಯಡಿಯಲ್ಲೇ  ಖಿಲ್ಲನೆ ನಕ್ಕರು ಎಂಬುದು ಮಾತ್ರ ಶುದ್ಧಕುಹಕ.

READ MORE - ಅಷ್ಟಕ್ಕೂ ಈ ಜನಶ್ರೀ ಚಾನಲ್ ಶುರುವಾಗೋದು ಯಾವಾಗ?
Los Angeles Fire Department Foundation. Click to learn more...
The Los Angeles Fire Department Foundation invites you to join members of the Los Angeles Fire Department, community leaders and other LAFD supporters at the...

Los Angeles Fire Department 2011 Awards Luncheon
Thursday, March 3, 2011
11:30 AM
Hollywood Palladium
6215 West Sunset Boulevard
Hollywood, CA 90028


Please join Fire Chief Millage Peaks as he presents the Medal of Valor, Medal of Merit, Special Commendations and the Lifetime Achievement Award.

Dress: Business Attire
RSVP by: February 24, 2011

Cost: General Public / $100 per ticket (all tables seat 10)
LAFD Sworn Members & LAFD Civilian Employees / $50.00 per ticket

For additional information, tickets and event sponsorship opportunities, please call (310) 552-4139.


Submitted by Brian Humphrey, Spokesman
Los Angeles Fire Department
READ MORE - LAFD Awards Luncheon Announced for March 3 at the Hollywood Palladium

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿರುವ ಅನುಮತಿ ಸರಿಯೇ?

ಹೀಗಂತ ಪ್ರಶ್ನೆ ಕೇಳಿದ್ದೆವು. ಸರಿ, ತಪ್ಪು, ಗೊತ್ತಿಲ್ಲ ಎಂಬ ಮೂರು ಉತ್ತರಗಳನ್ನು ಆಯ್ಕೆಗೆ ನೀಡಲಾಗಿತ್ತು. ಸಂಪಾದಕೀಯ ನಡೆಸಿದ ಈ ಪುಟ್ಟ ಸಮೀಕ್ಷೆಯಲ್ಲಿ ಮತ ಚಲಾಯಿಸಿದವರು ಒಟ್ಟು ೧೪೬ ಮಂದಿ. ಈ ಪೈಕಿ ೧೦೭ ಮಂದಿ ರಾಜ್ಯಪಾಲರ ನಿರ್ಧಾರ ಸರಿ ಎಂದು ಮತ ಚಲಾಯಿಸಿದ್ದಾರೆ. ೩೩ ಮಂದಿ ಸರಿಯಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ೬ ಮಂದಿ ಗೊತ್ತಿಲ್ಲ ಎಂದು ವೋಟ್ ಮಾಡಿದ್ದಾರೆ.

ರಾಜ್ಯಪಾಲರು ತೆಗೆದುಕೊಂಡ ತೀರ್ಮಾನ ಸರಿ ಎಂದವರು ಶೇ.೭೩.೨೮ ಮಂದಿಯಾದರೆ ತಪ್ಪು ಎಂದವರು ಶೇ. ೨೨.೬೦ರಷ್ಟು ಓದುಗರು. ಇನ್ನು ಗೊತ್ತಿಲ್ಲ ಎಂದವರು ಶೇ.೪.೧೦ರಷ್ಟು ಮಂದಿ.

ಮತ ಚಲಾಯಿಸಿದ ಎಲ್ಲ ೧೪೬ ಓದುಗರಿಗೂ ಕೃತಜ್ಞತೆಗಳು.

ಮುಂದಿನ ಸಮೀಕ್ಷೆಯೂ ಬಿ.ಎಸ್.ಯಡಿಯೂರಪ್ಪ ಅವರನ್ನು ಕುರಿತದ್ದೇ ಆಗಿದೆ. ಈಗಾಗಲೇ ರಾಜ್ಯಪಾಲರ ಅನುಮತಿ ಪಡೆದು ವಕೀಲರುಗಳಾದ ಸಿರಾಜಿನ್ ಬಾಷ ಮತ್ತು ಬಾಲರಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ವಿಶೇಷವೆಂದರೆ ಈ ಎಲ್ಲ ಪ್ರಕರಣಗಳನ್ನು ಬಯಲಿಗೆ ತಂದದ್ದು ಕರ್ನಾಟಕದ ಮೀಡಿಯಾಗಳು.

ಭ್ರಷ್ಟಾಚಾರದ ಆರೋಪಗಳು ಎದುರಾದ ಹಿನ್ನೆಲೆಯಲ್ಲಿ ಹಲವರು ಸಚಿವರ ತಲೆದಂಡವನ್ನು ಮುಖ್ಯಮಂತ್ರಿಗಳೇ ಪಡೆದಿದ್ದರು. ಈಗ ಸ್ವತಃ ಯಡಿಯೂರಪ್ಪನವರ ಸರದಿ.

ಮೊಕದ್ದಮೆಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆಗಾರಿಕೆ ನಿಭಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕೆ? ಇದು ನಮ್ಮ ಪ್ರಶ್ನೆ. ದಯವಿಟ್ಟು ನಿಮ್ಮ ಮತ ದಾಖಲಿಸಿ. ಕಳೆದ ಬಾರಿ ಮತ ಚಲಾಯಿಸದವರು ಈ ಬಾರಿಯಾದರೂ ಚಲಾಯಿಸಿ. ನಿಮ್ಮ ಬೆರಳಿಗೆ ನಾವು ಶಾಯಿ ಹಾಕುವುದಿಲ್ಲ!

READ MORE - ರಾಜ್ಯಪಾಲರ ನಡೆ ಸರಿ ಎಂದವರು ಶೇ.೭೩.೨೮ ಓದುಗರು

ಖಲೀಲ್ ಗಿಬ್ರಾನ್ ಹೇಳಿದ್ದನ್ನು ಒಮ್ಮೆ ಕೇಳಿ..

ಅವರು ಹೇಳುತ್ತಾರೆ, ಮಲಗಿದ ಗುಲಾಮನನ್ನು ಕಂಡರೆ ಅವನನ್ನು ಎಬ್ಬಿಸಬೇಡ
ಅವನು ಸ್ವಾತಂತ್ರ್ಯದ ಕನಸು ಕಾಣುತ್ತಿರಲಿ ಬಿಡು..
ನಾನು ಅವರಿಗೆ ಹೇಳುತ್ತೇನೆ, ಮಲಗಿದ ಗುಲಾಮನನ್ನು ನೀವು ಕಂಡರೆ, 
ಅವನನ್ನು ಎಬ್ಬಿಸಿ ಮತ್ತು ಸ್ವಾತಂತ್ರ್ಯದ ಅರ್ಥ ತಿಳಿಹೇಳಿ..

ಸಾಹಿಲ್ ಎಂದೇ ಖ್ಯಾತಿಯಾದ ಸಂವರ್ಥ ಈ ಮೇಲಿನ ಮಾತುಗಳನ್ನು ಉದ್ಧರಿಸಿ, ಕೆ.ವಿ ಅಕ್ಷರ ಇತ್ತೀಚೆಗೆ ಬರೆದ ಹರಾಜು- ಹರಕೆ ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ. ಶೋಷಣೆಗೆ ಒಳಗಾಗುವವನಿಗೆ ತನಗಾಗುತ್ತಿರುವುದು ಅವಮಾನ ಎಂದು ತಿಳಿಯದ ಹೊರತು ಅದು ಅವಮಾನವಲ್ಲ ಎಂದು ಬರೆದಿದ್ದ ಲೇಖನಕ್ಕೆ ಸಂವರ್ಥ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮಾತುಗಳಲ್ಲಿ ಸ್ಪಷ್ಟತೆ ಇದೆ. ಕೆಲವು ಉದಾಹರಣೆಗಳ ಮೂಲಕ ಅಕ್ಷರರವರ ವಾದ ಸರಣಿಯನ್ನು ಸಮರ್ಥವಾಗಿ ಟೀಕಿಸಿದ್ದಾರೆ. ನೀವು ಓದಲೇಬೇಕಾದ ಬರಹ ಅದು.

ಸಂವರ್ಥ ಉಡುಪಿಯವರು. ಮೂಲತಃ ಕವಿ. ಅಕ್ಕಪಕ್ಕದ ಕೆಲ ದೇಶಗಳ ಕವಿಗಳ ಜೊತೆ ನಿಕಟ ಸಂಪರ್ಕ ಇದೆ. ಹಾಗೆಯೇ ವಿಮರ್ಶೆಯಲ್ಲೂ ಎತ್ತಿದ ಕೈ. ಇತ್ತೀಚೆಗೆ ಹೊರ ಬಂದ ನೀಷೆ ಕುರಿತ ಪುಸ್ತಕವೊಂದಕ್ಕೆ ಸಂವರ್ಥ ಆಪ್ತವಾಗಿ ಹಿಂಬರಹ ಬರೆದಿದ್ದಾರೆ. ಮಣಿಪಾಲ್‌ನಲ್ಲಿ ಮಾಧ್ಯಮ ವ್ಯಾಸಂಗ ಮುಗಿಸಿ ಮಂಗಳೂರಿನಲ್ಲಿ ಕೆಲಕಾಲ ಪತ್ರಕರ್ತನಾಗಿ ದುಡಿದ ಸಂವರ್ಥ ಸದ್ಯ ಜವಾಹರಲಾಲ ನೆಹರು ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ವಿದ್ಯಾರ್ಥಿ. ಅವರ ಬ್ಲಾಗ್‌ಗೆ ಒಮ್ಮೆ ಭೇಟಿ ಕೊಡಿ.

ಅವರ ಬ್ಲಾಗ್: Crazy Mind's Eye

ಲೇಖನದ ಪೂರ್ಣಪಾಠ ಹೀಗಿದೆ:

If You See A Slave Sleeping…

It was shocking to read an article in the Sunday magazine of a major Kannada daily. As I have been travelling I got to know about this article quite late. It was a friend who drew my attention to this article which softly defends the ritual of ‘made snana’ where devotees roll on the left over food, in the name of right to belief.
 Few weeks ago I had read an article on the same lines on the same issue in the blog of a ‘research’ centre in Karnataka. But that was quite an expected stand from that ‘school’ of thought which thinks its path is that of de-schooling. But this article came as a shock because this was written by a sensible and respected author.
 I must accept that I am not too familiar with the ritual of ‘made snana’ but from whatever I know I have come to a conclusion that it shames human dignity. I am told, by one of the most respected progressive thinkers in Kannada, that this ritual is not imposed by Brahmins on the lower caste people and that even the upper caste people practice this ritual.
 The author of the article says that any action becomes oppressive or below human dignity only if the body and mind involved in the action feels so and argues that such a ritual should not be questioned as it is a matter of belief and this belief system appears oppressive and regressive only to the observers and not the practitioners.
 Very interestingly the author juxtaposes the ritual of ‘made snana’ with the auctioning of IPL players and says that the media and minds which oppose ‘made snana’ did not oppose the auctioning of human beings because of a colonial after-effect which makes us look at the local cultures as oppressive and regressive and not the ones driven by market and capitalist forces. I wonder why the author looks both the examples as different! To me both are below human dignity and both need to be opposed and banned. But the author, don’t know why, chose to look at the two examples as different and silently and softly attempts to convince that the ritual is acceptable as it is associated with the belief of the practitioners.
 There is a tribal community named Koraga. There is a ritual where the Koraga people are made to eat rice mixed with the hair, phlegm, urine and saliva of the upper caste people. This is to transfer the diseases of the upper caste to the lower caste. Sadly the Koraga people believe that they were born to eat rice mixed with the waste of the upper caste and liberate them from their diseases. It is, no doubt, a ritual which is slaughters human dignity even when the Koraga people do not think or feel so. They think it is their duty and the very cause of their birth. They believe so, I believe, because they have been, over the years, made to believe so. Do we defend such a ritual in the name of belief? Or do we oppose it because it is as inhumane as the IPL auction and the ‘made snana’ ritual?
 An activist friend once told me that he came across a child who was seriously unwell and needed quick medical help. The life itself was under threat. But the parents were taking the child to a temple and not to the doctor. When my friend insisted that the child be taken to the hospital and not to a temple the parents asked who was more concerned about the child, they- the parents- or the activist friend of mine. Do we defend the decision of the parents because it stems from their belief system? And let the child lose its life? Do we neglect the arguments of my friend just because he is an outsider and a non participant in the action?
Another activist friend of mine narrated an incident where he and his team of youths mobilized the ‘untouchable’ people and finalized on a date for temple entry. The ‘untouchable’ were charged up and all set to enter the temple. But on the decided date the ‘untouchables’ stopped when they all neared the temple because they, suddenly, felt that the God would feel offended if they entered the temple. They, deep from inside, believed that they were ‘untouchables’ and God created them so and hence they were not supposed to enter the temple. Do we let them be outside the temple (for now let us park aside the argument whether the untouchables are a part of Hinduism and related issues) because they themselves feel and believe that they are not supposed to enter the temple? If yes, then would any reformation any revolution possible? Isn’t such a stand supporting and protecting the existing system which is too oppressive in nature?
 Few months ago when I met a friend of mine after a long time she asked me what was the ‘thread’ that was tied on my right forehand. I said it was, ‘raakhi’ associated with the ritual of ‘raksha bandhan’. My friend asked me, “Don’t you think it is quite a patriarchal thing?” I had smiled and said, “The emotions of my sister is associated and I am quite attached to my sister and don’t want to hurt her emotions by not letting her tie the raakhi.” Listening to my explanation and justification my friend said, “Because you are attached to your sister and respect her emotions don’t you think you must make her understand that this ritual is patriarchic in nature?” I had no answer, as I felt that my friend made sense.
 In one of his poems the man from Lebanon, Kahlil Gibran has the following beautiful lines-
 They tell me: if you see a slave sleeping
Wake him not lest he be dreaming of freedom.
I tell them: If you see a slave sleeping
Wake him up and explain to him freedom.
 During the freedom movement while opposing the Colonial regime many went back to the so called great Indian culture, reinvented it, reinterpreted it to mobilize people and motivate them to fight the colonial power. But such a stream of thought made us blind to the darkness under the ‘bright’ lamp of the great Indian culture. Today while trying to oppose the colonial viewpoint of ‘self’ we are trying to repeat the same, in different ways and through different arguments, to justify everything that is native. This would be nothing but a self defeating step, as I see it, which will dehumanize ourselves and our society by strengthening the existing regressive forces.
 Few weeks ago there was an intellectual debate and discussion in Mangalore where S.N. Balagangadhara presented his viewpoints, about which we all know. Opposing his take Pattabhirama Somayaji, then and there, said that Balagangadhar’s thesis had words and arguments which did not consider the lives of human beings and human experience. What would knowledge and words be if divorced from human experience be but inhumane?
 The rebel musician Hanns Eliser while speaking of popular music and culture, in one of his writings, says that these popular music and culture serve as narcotics to the working class. While understanding that the working class finds a need for such an opium, Eisler draws our attention to what this opium final serves. It only energizes the working class to refuel themselves for the work next morning and help the oppressive class to make profit. Isn’t religion also an opium, as Marx said? Aren’t rituals and belief systems attached to religion also such narcotics? Should the slave be left to dream of freedom in his sleep? Or should he be woken up and explained freedom?
ಕೃಪೆ:  Crazy Mind's Eye

READ MORE - ಮಲಗಿದ ಗುಲಾಮನನ್ನು ಕಂಡರೆ ಸ್ವಾತಂತ್ರ್ಯದ ಅರ್ಥ ತಿಳಿಹೇಳಿ...

ನಾಳೆ ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮ ಅಂಕಣ ಬರಹಗಳ ಎರಡು ಸಂಪುಟ ಬಿಡುಗಡೆ, ನಯನ ಸಭಾಂಗಣದಲ್ಲಿ ಮಧ್ಯಾಹ್ನ ೪ಗಂಟೆಗೆ. ಸಾಹಿತಿ ಚಂದ್ರಶೇಖರ ಕಂಬಾರ, ಪ್ರಜಾವಾಣಿ ಸಂಪಾದಕ ಕೆ.ಎನ್.ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಅತಿಥಿಗಳು. ಕೃತಿಗಳ ಪ್ರಕಾಶಕರು ಸಪ್ನ ಬುಕ್ ಹೌಸ್.

ದಂಡಾವತಿಯವರು ಮೂಲತಃ ಬಿಜಾಪುರದವರು, ಪ್ರತಿಭಾವಂತರು. ಪ್ರಜಾವಾಣಿ ಸೇರುವ ಮುನ್ನ ಶೂದ್ರ ಪತ್ರಿಕೆಯಲ್ಲಿ ಕೆಲಕಾಲ ದುಡಿದಿದ್ದರು. ದಿ ಪ್ರಿಂಟರ‍್ಸ್ ಮೈಸೂರು ಸಂಸ್ಥೆಗೆ ಸೇರಿದ ನಂತರ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡಮಿ  ಪತ್ರಿಕೋದ್ಯಮ ಕುರಿತ ದಂಡಾವತಿಯವರ ಎರಡು ಕೃತಿಗಳನ್ನು ಪ್ರಕಟಿಸಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿದೆ.

ಇಂಥ ಹಿರಿಯ ಪತ್ರಕರ್ತರೂ ಒಮ್ಮೊಮ್ಮೆ ಎಡವಿಬಿಡುತ್ತಾರೆ. ಎಡವಿದ್ದು ಇವತ್ತಿನ ಆಧುನಿಕಯುಗದಲ್ಲಿ ನಿಚ್ಚಳವಾಗಿ ಎಲ್ಲರಿಗೂ ಕಾಣಸಿಗುತ್ತದೆ. ಇಲ್ಲಿ ಒಂದು ಉದಾಹರಣೆ ನಿಮ್ಮ ಮುಂದಿದೆ.

ಕಳೆದ ವರ್ಷ ನಡೆದ ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ದಂಡಾವತಿಯವರು ತಮ್ಮ ನಾಲ್ಕನೇ ಆಯಾಮದಲ್ಲಿ ಉಪಚುನಾವಣೆಗಳ ಕುರಿತಾಗಿ ಬರೆದಿದ್ದರು. ನಿಷ್ಠುರವಾಗಿ ಹೇಳಬೇಕೆಂದರೆ ಅದು ಅವರ ಅಂಕಣಕ್ಕೆ ಒಗ್ಗುವ ವಿಷಯವೇ ಆಗಿರಲಿಲ್ಲ. ವರದಿಗಾರನೊಬ್ಬನ ಚುನಾವಣಾ ವಿಶ್ಲೇಷಣೆಯ ಧಾಟಿಯಲ್ಲಿ ಬರಹ ಸಾಗುತ್ತದೆ.

ಚುನಾವಣೆಯ ಕುರಿತು ಬರೆಯುತ್ತ ದಂಡಾವತಿಯವರು ಒಂದು ವಿಷಯವನ್ನು ತೇಲಿಬಿಟ್ಟರು. ಈ ಸಾಲುಗಳನ್ನು ಗಮನಿಸಿ: ಬಿಜೆಪಿ ಆಂತರಿಕವಾಗಿ ಕುದಿಯುತ್ತಿರುವಾಗಲೇ ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಬೇರೆಯದೇ ಲೆಕ್ಕ ಹಾಕಿದಂತಿದೆ. ದೇವೇಗೌಡರಿಗೆ ನಿಕಟವಾಗಿರುವ ಧರ್ಮಸಿಂಗ್, ಗುಲಬರ್ಗಾ ದಕ್ಷಿಣ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ, ಕಡೂರು ಕ್ಷೇತ್ರವನ್ನು ನಿಮಗೆ ಬಿಟ್ಟುಕೊಡುತ್ತೇವೆ ಎಂದು ಮಾತಾಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ.

ಈ ಅಂಕಣ ಪ್ರಕಟಗೊಂಡಿದ್ದು ಸೆ.೫ರಂದು. ಪ್ರಜಾವಾಣಿಯಲ್ಲಿ ಇಂಥದ್ದೊಂದು ಸುದ್ದಿ ಪ್ರಕಟಗೊಂಡರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಅದರಲ್ಲೂ ಪತ್ರಿಕೆಯ ನೇತೃತ್ವ ವಹಿಸಿರುವ ಸಹಸಂಪಾದಕರೇ ಬರೆದರೆ?

ಎಚ್.ಡಿ.ದೇವೇಗೌಡರು ಸುಮ್ಮನಿರಲಿಲ್ಲ. ಸೆ.೮ರ ವಿಜಯ ಕರ್ನಾಟಕದ ಮುಖಪುಟದಲ್ಲೇ ಗೌಡರ ವಿಶೇಷ ಸಂದರ್ಶನ ಪ್ರಕಟಗೊಂಡಿತು. ಒಳ ಒಪ್ಪಂದ: ಮಾಧ್ಯಮ ವರದಿಗೆ ಆಕ್ರೋಶ ಎಂಬ ತಲೆಬರಹದ ಈ ಸಂದರ್ಶನದಲ್ಲಿ ಗೌಡರು ಈ ಗಾಳಿಸುದ್ದಿಯನ್ನು ತಿರಸ್ಕರಿಸಿದರಲ್ಲದೆ, ಈ ರೀತಿ ಸುದ್ದಿ ಹಬ್ಬಿಸುವವರಿಗೆ ನಾಚಿಕೆ ಇಲ್ಲ ಎಂದು ಗುಡುಗಿದರು.

ನಂತರ ಚುನಾವಣೆ ನಡೆಯಿತು. ಗೆದ್ದಿದ್ದು ಜೆಡಿಎಸ್ ಅಭ್ಯರ್ಥಿ.

ವಿಷಯ ಏನು ಅಂದರೆ, ಇದರಲ್ಲಿ ದಂಡಾವತಿಯವರ ದುರುದ್ದೇಶಗಳೇನೂ ಇರಲಿಲ್ಲ. ಅವರಿಗೆ ಮಾಹಿತಿ ಒದಗಿಸಿದ ಗುಲ್ಬರ್ಗದ ಹಿರಿಯ ಸಿಬ್ಬಂದಿ ಬೇಕೆಂದೇ ದಾರಿ ತಪ್ಪಿಸಿದ್ದರು. ಈ ಉಪಚುನಾವಣೆಯಲ್ಲಿ ವಿಪರೀತ ಆಕ್ಟಿವ್ ಆಗಿದ್ದ ಆ ಮಹಾನುಭಾವ ತಮ್ಮ ಸಂಪಾದಕರಿಂದಲೇ ಇಂಥದ್ದನ್ನು ಬರೆಸುವ ಹಿಂದೆ ಯಾವ ಉದ್ದೇಶವಿತ್ತೋ ಯಾರು ಬಲ್ಲರು? ಇದೆಲ್ಲ ಗೊತ್ತಾದ ನಂತರ ದಂಡಾವತಿ ಆ ತಮ್ಮ ಶಿಷ್ಯನನ್ನು ತರಾಟೆಗೆ ತೆಗೆದುಕೊಂಡರಾ? ಗೊತ್ತಿಲ್ಲ.

ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗುವಂಥ ಪುಸ್ತಕಗಳನ್ನು ಬರೆದ ದಂಡಾವತಿಯಂಥವರೇ ಹೀಗೆ ಎಡವಿದರೆ ಹೇಗೆ? ಪತ್ರಕರ್ತರು ಬರೆಯುವಾಗ ಎಷ್ಟು ಎಚ್ಚರಿಕೆಯಿಂದಿರಬೇಕು ಎಂಬುದನ್ನು ಹೇಳಲು ಈ ಉದಾಹರಣೆಯನ್ನು ನೀಡಿದೆವಷ್ಟೆ.

ನಾಳೆ ದಂಡಾವತಿಯವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಇಂಥ ಇನ್ನೂ ಹಲವು ಸಂಪುಟಗಳನ್ನು ಅವರು ಹೊರತರುವಂತಾಗಲಿ ಎಂದು ಆಶಿಸುತ್ತೇವೆ. ದಂಡಾವತಿಯವರಿಗೆ ಅಭಿನಂದನೆಗಳು.

ಮರೆತಿದ್ದ ಮಾತು: ಇಲ್ಲಿ ಬಳಸಿರುವ ಪದ್ಮರಾಜ ದಂಡಾವತಿಯವರ ಫೋಟೋ ಶ್ರೀವತ್ಸ ಜೋಷಿಯವರ ಕ್ಯಾಮರಾದಿಂದ ತೆಗೆದದ್ದು. ಮೀಡಿಯಾ ಮಿರ್ಚಿಯಲ್ಲಿ ಪ್ರಕಟಗೊಂಡಿದ್ದನ್ನು ಕದ್ದಿದ್ದೇವೆ. ಕೇಳದೇ ಬಳಸಿದ್ದಕ್ಕೆ ಕ್ಷಮೆಯಿರಲಿ.
READ MORE - ನಾಳೆ ದಂಡಾವತಿ ಕೃತಿಗಳ ಬಿಡುಗಡೆ: ಅಭಿನಂದನೆಗಳು

ಮುಖ್ಯಮಂತ್ರಿ ಹಾಗು ಇತರ ಕೆಲವು ಮಂತ್ರಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಭೂ ಡಿನೋಟಿಫೈ ಇತ್ಯಾದಿ ಆರೋಪಗಳ ಬಗ್ಗೆ ಲೋಕಾಯುಕ್ತರು ಮತ್ತು ನ್ಯಾಯಮೂರ್ತಿ ಪದ್ಮರಾಜ ಆಯೋಗ ವಿಚಾರಣೆ ನಡೆಸುತ್ತಿದೆ. ಮುಖ್ಯಮಂತ್ರಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಎಲ್ಲ ಆರೋಪಗಳ ಬಗ್ಗೆ ಮೂರು ನ್ಯಾಯ ವೇದಿಕೆಗಳಲ್ಲಿ ವಿಚಾರಣೆ ನಡೆಯುವುದು ಎಷ್ಟರಮಟ್ಟಿಗೆ ಸರಿಯಾದೀತು?- ಪ್ರಜಾವಾಣಿ ಸಂಪಾದಕೀಯ

ಈಗಾಗಲೇ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿರುವಾಗ ಮೂರನೆಯದು ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಈ ಪರಂಪರೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಸರ್ಕಾರವೇ ಅಲ್ಲವೇ? ಲೋಕಾಯುಕ್ತರು ತನಿಖೆ ಮಾಡುತ್ತಿದ್ದ ಪ್ರಕರಣಗಳನ್ನು ಅವರ ಗಮನಕ್ಕೂ ತರದೆ ತಾವೇ ನೇಮಿಸಿದ ತನಿಖಾ ಆಯೋಗಕ್ಕೆ ಒಪ್ಪಿಸಿದಾಗ ಎರಡೆರಡು ತನಿಖೆಗಳು ಸರಿ ಅಲ್ಲ ಎಂದು ಸರ್ಕಾರಕ್ಕೆ ಅನಿಸಲಿಲ್ಲವೇ?-ದಿನೇಶ್ ಅಮೀನ್ ಮಟ್ಟು.

ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಹಾಗು ಯುಪಿಎ ಸರ್ಕಾರದ ವಕ್ತಾರ ಎಂದು ಬಿಜೆಪಿ ನಾಯಕರು ಟೀಕಿಸುವುದರಲ್ಲಿ ಅರ್ಥವಿದೆ ಎಂಬಂತೆ ನಡೆದುಕೊಂಡರು-ಪ್ರಜಾವಾಣಿ ಸಂಪಾದಕೀಯ

ಭಾರದ್ವಾಜ್ ಅವರು ಕಾಂಗ್ರೆಸ್ ಏಜೆಂಟ್ ಅನಿಸಿಕೊಳ್ಳಲು ರಾಜ್ಯಪಾಲರಾಗುವ ಮೊದಲು ಅವರು ಆ ಪಕ್ಷದ ಸದಸ್ಯರಾಗಿದ್ದದ್ದೇ ಕಾರಣ ಎಂದಾದರೆ ಆರು ವರ್ಷಗಳ ಕಾಲ ಎನ್‌ಡಿಎ ಅಧಿಕಾರಾವಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದವರೆಲ್ಲ ಬಿಜೆಪಿ ಏಜೆಂಟ್‌ಗಳೇ?-ದಿನೇಶ್ ಅಮೀನ್ ಮಟ್ಟು

ಮುಖ್ಯಮಂತ್ರಿ ಅಥವಾ ಸರ್ಕಾರದ ಇತರ ಮಂತ್ರಿಗಳ ಮೇಲೆ ಯಾರೇ ಭ್ರಷ್ಟಾಚಾರದ ದೂರು ಸಲ್ಲಿಸಿದರೂ ದಾಖಲೆ ಹಾಗೂ ಪುರಾವೆಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೇ ಹೊರತು ಅದಕ್ಕೆ ಮೊದಲೇ ಸಂಘರ್ಷಕ್ಕೆ ಇಳಿದವರಂತೆ ಬಹಿರಂಗವಾಗಿ ಆರೋಪಗಳ ಬಗ್ಗೆ ವ್ಯಾಖ್ಯಾನ ಮಾಡುವುದು ಅಪೇಕ್ಷಣೀಯವಲ್ಲ.-ಪ್ರಜಾವಾಣಿ ಸಂಪಾದಕೀಯ

ಇಂತಹ ಸಂದರ್ಭದಲ್ಲಿ ತಮ್ಮ ಮುಂದಿರುವ ಸಾಕ್ಷ್ಯಾಧಾರಗಳ ಸತ್ಯಾಸತ್ಯತೆಯನ್ನು ತಮಗೆ ಇರುವ ಅಧಿಕಾರದ ವ್ಯಾಪ್ತಿಯಲ್ಲಿ ದೃಢೀಕರಿಸಿ ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ ಮುಖ್ಯಮಂತ್ರಿಗಳನ್ನು ಪ್ರಾಸಿಕ್ಯೂಟ್ ಮಾಡಲು ಅವಕಾಶ ನೀಡಬಹುದಾಗಿದೆ. ಇದು ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ. ಅದನ್ನು ಭಾರದ್ವಾಜ ಚಲಾಯಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ತಮ್ಮ ಅಧಿಕಾರದ ದುರುಪಯೋಗ ಮಾಡಿದ್ದಾರೆ ಇಲ್ಲವೇ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸುವ ಹಾಗಿಲ್ಲ.- ದಿನೇಶ್ ಅಮೀನ್ ಮಟ್ಟು.

ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದು ನಿಮಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿರಬಹುದು. ಇವತ್ತಿನ ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಪ್ರಕಟಗೊಂಡಿರುವ ಎರಡು ಬರಹಗಳು ನಿಮ್ಮ ಕಣ್ಣ ಮುಂದಿವೆ. ಒಂದು ರಾಜ್ಯಪಾಲರ ರಾಜಕೀಯ ನಡೆ ಎಂಬ ಸಂಪಾದಕೀಯ ಲೇಖನ. ಮತ್ತೊಂದು ದಿನೇಶ್ ಅಮೀನ್ ಮಟ್ಟು ಅವರ ಸೋಮವಾರದ ಅನಾವರಣ ಅಂಕಣದಲ್ಲಿ ಪ್ರಕಟಗೊಂಡಿರುವ ಅಧಿಕಾರದ ಕೆಸರಲ್ಲಿ ಹೂತುಹೋದ ನೈತಿಕತೆಯ ಕಮಲ ಎಂಬ ಬರಹ. ಎರಡೂ ಪಕ್ಕಪಕ್ಕದಲ್ಲೇ ಇವೆ. ಒಂದಕ್ಕೊಂದು ಎಷ್ಟು ವಿರುದ್ಧದ ಧೋರಣೆಗಳನ್ನು ತಳೆದಿವೆ ಎಂಬುದಕ್ಕೆ ಮೇಲೆ ಉದಾಹರಿಸಿದ ಸಾಲುಗಳು ಸಾಕ್ಷಿ ಹೇಳುತ್ತಿವೆ.

ಪ್ರಜಾವಾಣಿಗೆ ಏನಾಗಿ ಹೋಗಿದೆ? ಯಾಕಿಷ್ಟು ಗೊಂದಲ? ಏನಿದರ ಹಕೀಕತ್ತು?

ನಿನ್ನೆ ಪದ್ಮರಾಜ ದಂಡಾವತಿ ಏನನ್ನು ಹೇಳಲು ಹೊರಟಿದ್ದಾರೋ ಅದನ್ನೆಲ್ಲ ಒಂದೇ ಏಟಿನಲ್ಲಿ ನೀವಳಿಸಿ ಎಸೆಯುವಂತಿದೆ ದಿನೇಶ್ ಅವರ ಅಂಕಣ. ಇದಕ್ಕೂ ರಾಶಿ ರಾಶಿ ಸಾಕ್ಷಿಗಳಿವೆ.

ದಂಡಾವತಿ ಥೇಟ್ ಬಿಜೆಪಿಯ ಸಿ.ಟಿ.ರವಿಯ ಶೈಲಿಯಲ್ಲಿ ರಾಜ್ಯಪಾಲರ ಪೂರ್ವಾಶ್ರಮವನ್ನು ಕೆದಕಿ ಮಾತನಾಡಿದ್ದಾರೆ. ಪೂರ್ವಾಶ್ರಮ ಏನೇ ಆಗಿದ್ದರೂ ಸಂವಿಧಾನದ ಚೌಕಟ್ಟಿನಲ್ಲಿ ಅವರು ಕೈಗೊಂಡ ನಿರ್ಧಾರಗಳೆಲ್ಲ ಅಬದ್ಧ ಎಂದು ಹೇಳಬಹುದೇ? ಎಂದು ನೇರನೇರ ಟಾಂಗು ಕೊಟ್ಟಿದ್ದಾರೆ ದಿನೇಶ್.

ರಾಜ್ಯಪಾಲರ ಕುರಿತ ಏಜೆಂಟರೆಂಬ ದಂಡಾವತಿಯವರ ವ್ಯಾಖ್ಯಾನಕ್ಕೂ ದಿನೇಶ್ ಸಮರ್ಥವಾಗಿ ಉತ್ತರಿಸಿದ್ದಾರೆ. ದಿನೇಶ್ ಅವರು ಬರೆದ ವಾಕ್ಯಗಳ ಪೈಕಿ ಕೆಲವು ಒಳಮರ್ಮಗಳಿಗೆ ತಾಕುತ್ತವೆ, ಕೆಲವು ನೇರವಾಗಿ ಕಪಾಲಕ್ಕೆ ಹೊಡೆಯುತ್ತವೆ. ದಂಡಾವತಿಯವರ ನಾಲ್ಕನೇ ಆಯಾಮವನ್ನು ಓದುವುದಕ್ಕೂ ಮುನ್ನವೇ ದಿನೇಶ್ ಇದನ್ನು ಬರೆದಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೂ ಬಹುತೇಕ ಪ್ರಶ್ನೋತ್ತರಗಳ ಹಾಗಿವೆ ಎರಡೂ ಅಂಕಣಗಳು.

ಆದರೆ ದಿನೇಶ್ ಅಂಕಣವನ್ನು ಮಸುಕು ಮಾಡಲೆಂದು ರಾಜ್ಯಪಾಲರನ್ನು ವಾಪಾಸು ಕರೆಸಿಕೊಳ್ಳಬೇಕು ಎಂಬ ಅಭಿಪ್ರಾಯ ಸೂಚಿಸುವ ಸಂಪಾದಕೀಯ ಏಕೆ ಸಿದ್ಧವಾಯಿತು? ಇದು ಉದ್ದೇಶಪೂರ್ವಕವಾಗಿ ಸೃಷ್ಟಿಯಾದ ಪ್ರತಿಕ್ರಿಯೆಯಾಗಿದ್ದರೆ ಇದರ ಅನಿವಾರ್ಯತೆ ಏನಿತ್ತು? ಪ್ರಜಾವಾಣಿಯ ಓದುಗ ಯಾವುದನ್ನು ನಂಬಬೇಕು? ದಂಡಾವತಿ? ದಿನೇಶ್? ಸಂಪಾದಕೀಯ? ತಾನೇ ಗೊಂದಲದ ಕೆಸರಲ್ಲಿ ಮುಳುಗಿಹೋಗಿರುವ ಪ್ರಜಾವಾಣಿಯನ್ನು ಮೇಲಕ್ಕೆ ಎತ್ತುವವರು ಯಾರು?

ನಿವೃತ್ತರಾಗುವವರೆಗೂ ಡಿ.ವಿ.ರಾಜಶೇಖರ ಪ್ರಜಾವಾಣಿಯ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಪ್ರಜಾವಾಣಿಯ ಸಂಪಾದಕೀಯಗಳಿಗೆ ನಿಜಕ್ಕೂ ಒಂದು ಘನತೆ ಇದೆ. ಡಿವಿಆರ್ ಆ ಪರಂಪರೆಯನ್ನು ಸಮೃದ್ಧಗೊಳಿಸಿದವರು. ಆದರೆ ಇವತ್ತು ತನ್ನ ಅಂಕಣಕಾರನ ಬರಹದ ಮೌಲ್ಯವನ್ನು ತಗ್ಗಿಸಲೆಂದೇ ಹೆಣೆಯಲಾದ ಸಂಪಾದಕೀಯಕ್ಕೆ ಯಾವ ಮೌಲ್ಯವಿದೆ? ಯಾರನ್ನು ಮೆಚ್ಚಿಸಲು ಈ ಸರ್ಕಸ್ಸು? ಯಾರ ಕುಣಿಕೆಯಲ್ಲಿ ಸಿಕ್ಕಿ ಬಿದ್ದಿದೆ ಪ್ರಜಾವಾಣಿ?

ಕೊನೆಕುಟುಕು: ಮೂರು ನ್ಯಾಯಸಂಸ್ಥೆಗಳ ಎದುರು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಯುತ್ತಿವೆ ಎಂದು ನಿನ್ನೆ ದಂಡಾವತಿಯವರು ಬರೆದಿದ್ದರು. ಇವತ್ತಿನ ಸಂಪಾದಕೀಯ ಹಾಗು ದಿನೇಶ್ ಅಂಕಣದಲ್ಲೂ ಇದು ಪುನರಾವರ್ತನೆಗೊಂಡಿವೆ. ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೇ ಪದೇ ಪದೇ ತಾವು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದರೂ ಯಾಕೆ ಹೀಗೆ ಹಸಿಹಸಿ ಸುಳ್ಳುಗಳನ್ನು ಬಿತ್ತರಿಸಲಾಗುತ್ತಿದೆ? ಬೇರೆಯವರು ಹಾಗಿರಲಿ, ದಿನೇಶ್ ಅವರಾದರೂ ಸತ್ಯ ಬರೆಯಬಹುದಿತ್ತಲ್ಲವೇ? ಇದನ್ನು ಸಹವಾಸದೋಷ ಅನ್ನೋಣವೇ?
READ MORE - ಗೊಂದಲದ ಕೆಸರಲ್ಲಿ ಹೂತುಹೋದ ಪ್ರಜಾವಾಣಿ!
On Saturday, January 22, 2011 at 5:47 PM, 6 Companies of Los Angeles Firefighters, 2 LAFD Rescue Ambulances, 1 Arson Unit, 1 EMS Battalion Captain and 2 Battalion Chief Officer Command Teams, a total of 40 Los Angeles Fire Department personnel under the direction of Battalion Chief Wade White, responded to a Structure Fire with Civilian Injury at 1630 South Bentley Avenue in Westwood.



Firefighters arrived quickly to find what appeared to be a balcony fire on the uppermost floor of a U-shaped 3 story garden-style apartment building. As they bolted up stairwells and through hallways to the apartment of fire origin, firefighters calmly guided several residents to 'shelter in place' pending an assessment of the blaze.

Near the involved apartment, firefighters were met by a severely burned man, whom they immediately removed to safety as they tackled the flames, which were extinguished in less than ten minutes.

In halting words, the burned man advised responders he had been awakened by one of the properly functioning smoke alarms within his apartment, alerting him to a burning couch in an adjacent room - which like the rest of his apartment, was not equipped with residential fire sprinklers.

Rather than simply escape his apartment, the man unwisely attempted to move the flaming sofa to a nearby balcony. In doing so, he was swiftly enveloped in fire, sustaining painful second- and third-degree burns to his hands, arms, torso and face, as well as thermal injury to his upper respiratory system.

Provided prompt on-scene care by a team of LAFD Paramedics, he was transported to the nearby Ronald Reagan UCLA Medical Center in serious condition. Following stabilization at that facility, it was anticipated the man would require prolonged specialty care at a regional burn center.

No other injuries were reported.

Property loss from the fire is estimated at $10,000 ($5,000 structure & $5,000 contents).

The cause of this small but devastating fire has been categorized as accidental, and attributed to a heating source placed too close to combustible furnishings.

(video)

Submitted by Brian Humphrey, Spokesman
Los Angeles Fire Department
READ MORE - Westwood Man Severely Injured in Attempt to Move Burning Couch

ಪದ್ಮರಾಜ ದಂಡಾವತಿ ಪ್ರಜಾವಾಣಿಯ ಸಹಸಂಪಾದಕರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರು. ನಾಲ್ಕನೇ ಆಯಾಮ ಪ್ರತಿ ಭಾನುವಾರ ಪ್ರಕಟಗೊಳ್ಳುವ ಇವರ ಅಂಕಣ. ಇವತ್ತಿನ ಅಂಕಣದ ಶೀರ್ಷಿಕೆ: ಘನತೆವೆತ್ತ ರಾಜ್ಯಪಾಲರೇ ಇದು ಸಹಜ ನ್ಯಾಯವಲ್ಲ. ದಂಡಾವತಿಯವರಿಗೆ ನಾವು ಹೇಳುತ್ತಿರುವ ಮಾತು: ಘನತೆವೆತ್ತ ಸಂಪಾದಕರೇ ಇದು ನ್ಯಾಯನಿಷ್ಠುರ  ಲೇಖನ ಅಲ್ಲ.

ಇಡೀ ಲೇಖನವನ್ನು ಓದಿದರೆ, ನೂರೆಂಟು ಪ್ರಶ್ನೆಗಳು ಉದ್ಭವಿಸುತ್ತಿವೆ. ಅಂಕಣಕಾರರ ಅಜ್ಞಾನ, ವ್ಯಕ್ತಿನಿಷ್ಠೆ, ಪಕ್ಷನಿಷ್ಠೆ, ಜಾಣಮರೆವು ಎಲ್ಲವೂ ಬಟಾಬಯಲಾಗಿವೆ.

ಪ್ರಜಾವಾಣಿಯಂತಹ ಪತ್ರಿಕೆಯ ಅಂಕಣಕ್ಕೆ ಅದರದ್ದೇ ಆದ ಮಹತ್ವ ಇರುತ್ತದೆ. ಪ್ರಜಾವಾಣಿಗೊಂದು ಗಾಂಭೀರ್ಯವಿದೆ, ಸೈದ್ಧಾಂತಿಕ ಹಿನ್ನೆಲೆಯಿದೆ. ಜನಪರ ಕಾಳಜಿಯನ್ನು ಅದು ಸದಾ ಕಾಪಾಡುತ್ತಾ ಬಂದಿದೆ. ಈ ಎಲ್ಲ ಪರಂಪರೆಯನ್ನು ಮಣ್ಣುಪಾಲು ಮಾಡುವ ಅಂಕಣ ಬರಹ ಇದು.

ನಿಜ, ರಾಜ್ಯಪಾಲರ ನಡವಳಿಕೆ ಕೆಲವರಿಗೆ ಅತಿರೇಕವೆನ್ನಿಸಿರಬಹುದು. ಆದರೆ ಅದನ್ನು ಟೀಕಿಸುವುದಕ್ಕೂ ಒಂದು ಕ್ರಮ ಇರಬೇಕಿತ್ತು. ಸಂವಿಧಾನದ ಆಶಯ, ಅಧಿನಿಯಮ, ವಿವಿಧ ಕಾಯ್ದೆಗಳ ಆಧಾರದಲ್ಲಿ ವಾದ ಮಂಡಿಸಿದ್ದರೆ, ಒಂದಿಷ್ಟು ಚರ್ಚೆಗೆ ಅವಕಾಶ ಇತ್ತು. ಪ್ರಜಾವಾಣಿಯ ಅಂಕಣಕಾರನಿಂದ ಓದುಗ ಅದನ್ನೇ ನಿರೀಕ್ಷಿಸುತ್ತಾನೆ.

ಆದರೆ, ಮುಖ್ಯಮಂತ್ರಿಯ ಪತ್ರಿಕಾ ಹೇಳಿಕೆಯೇ ಅಂಕಣದ ರೂಪದಲ್ಲಿ ಪ್ರಕಟಗೊಂಡಂತೆ ಕಂಡರೆ?

ಪದ್ಮರಾಜ ದಂಡಾವತಿಯವರಿಗೆ ಎಷ್ಟು ಜಾಣ ಮರೆವು ಎಂದರೆ ತಮ್ಮ ಅಂಕಣದಲ್ಲಿ ಎಲ್ಲಿಯೂ, ಮುಖ್ಯಮಂತ್ರಿ ಅವರ ಮಕ್ಕಳು ಮಾಡಿರುವ ಭಾನಗಡಿಗಳನ್ನು ಉಲ್ಲೇಖಿಸುವುದೇ ಇಲ್ಲ. ಅನೈತಿಕ ಡಿನೋಟಿಫಿಕೇಷನ್‌ಗಳ ಮೂಲಕ ನೂರಾರು ಕೋಟಿ ಲೂಟಿಯಾಗಿರುವುದು ಅವರನ್ನು ಕಾಡಿಸುವುದೇ ಇಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಮುಖ್ಯಮಂತ್ರಿ ಮಾಡಿರುವುದು ಅನೈತಿಕ ಎಂದು ಒಪ್ಪಿಕೊಳ್ಳುತ್ತಾರೆ. ಪತ್ರಕರ್ತ ದಂಡಾವತಿ ಮಾತ್ರ ಮುಖ್ಯಮಂತ್ರಿಯ ನಿರ್ಧಾರಗಳನ್ನು ಟೀಕಿಸುವ ಗೋಜಿಗೇ ಹೋಗುವುದಿಲ್ಲ.

ಮುಖ್ಯಮಂತ್ರಿಯ ಕೆಲವು ನಿರ್ಧಾರಗಳಿಂದ ರಾಜ್ಯದ ಬೊಕ್ಕಸಕ್ಕೆ ೪೫೦ ಕೋಟಿಗೂ ಹೆಚ್ಚು ನಷ್ಟವಾಗಿದೆ. ಅವರ ಕುಟುಂಬಕ್ಕೆ ೨೦೦ ಕೋಟಿ ರೂ ಅಕ್ರಮವಾಗಿ ಸಂದಾಯವಾಗಿದೆ. ಇದನ್ನೆಲ್ಲಾ ಕೇಳುತ್ತಿದ್ದರೆ, ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿರುವವರ ಬಗ್ಗೆ ಎಂತಹವರಿಗೂ ಸಿಟ್ಟು ಬರುವುದು ಸಹಜ. ಆದರೆ ದಂಡಾವತಿಗೆ ಅದಾವುದೂ ಆಗುವುದಿಲ್ಲ!?

ರಾಜ್ಯಪಾಲರು ಮುಖ್ಯಮಂತ್ರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶ ಕೊಟ್ಟಿಲ್ಲ ಎನ್ನುತ್ತಾರೆ ದಂಡಾವತಿ.

ಒಬ್ಬ ವ್ಯಕ್ತಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ ಎಂದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆರೋಪ ಎದುರಿಸುತ್ತಿರುವವರು ಮುಖ್ಯಮಂತ್ರಿ ಅಥವಾ ಮಂತ್ರಿಯಾಗಿದ್ದರೆ, ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ರಾಜ್ಯಪಾಲರ ಅನುಮತಿ ಬೇಕು ಎನ್ನುತ್ತದೆ ಕಾನೂನು. ಅವರು ಇರುವ ಸ್ಥಾನದ ಕಾರಣ ಈ ವಿಶೇಷ ಅನುಮತಿ ಅನಿವಾರ್ಯ. ಅದರ ಹೊರತಾಗಿ ಅವರೂ ಸಾಮಾನ್ಯರೆ. ರಾಜ್ಯಪಾಲರು ತಮ್ಮ ಎದುರಿಗೆ ಬಂದ ಅರ್ಜಿಯನ್ನು ನೋಡಿ, ಅದರಲ್ಲಿ ದಾವೆ ಹೂಡಲು ಸಾಕಷ್ಟು ಮಾಹಿತಿ ಇದೆ ಎಂದು ಅನಿಸಿದರೆ ಅವರು ಯಾವುದೇ ಕಾಲಮಿತಿ ಇಲ್ಲದೆ ಅನುಮತಿ ನೀಡಲು ಅವಕಾಶ ಇದೆ. ಆದರೆ ಈ ಸಂದರ್ಭದಲ್ಲಿ ರಾಜ್ಯಪಾಲ ಭಾರದ್ವಾಜ ಪೂರಕ ಮಾಹಿತಿ ಕೇಳಿ ರಾಜ್ಯ ಸರಕಾರಕ್ಕೆ ಪತ್ರ ಬರೆದರು. ತಮಗೆ ತಲುಪಿಸಿದ ದಾಖಲೆಗಳನ್ನು ಪರಿಶೀಲಿಸಿ ನಂತರವಷ್ಟೆ ಅನುಮತಿ ನೀಡಿದ್ದಾರೆ. ದಂಡಾವತಿ ಹೇಳುವಂತೆ ಮುಖ್ಯಮಂತ್ರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿಲ್ಲ ಎನ್ನುವುದು ಒಪ್ಪುವ ಮಾತಲ್ಲ. ಏಕೆಂದರೆ, ವಾದಿ, ಪ್ರತಿವಾದಿ ಎಲ್ಲರನ್ನೂ ಕೇಳಿ ತೀರ್ಮಾನ ಕೊಡಲು ರಾಜ್ಯಪಾಲರಿಗೆ ಅವಕಾಶ ಇಲ್ಲ. ಅದೇನಿದ್ದರೂ ನ್ಯಾಯಾಲಯದ ಕೆಲಸ. ಹಾಗಾಗಿ ಈಗ ಆರೋಪ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಅಲ್ಲಿ ಮುಖ್ಯಮಂತ್ರಿಗೆ ಸಮರ್ಥಿಸಿಕೊಳ್ಳಲು ಅವಕಾಶ ಇದೆ. ದಂಡಾವತಿಯಂತಹ ಹಿರಿಯ ಪತ್ರಕರ್ತರಿಗೆ ಇದು ತಿಳಿಯುವುದಿಲ್ಲ ಎಂದು ನಂಬಬಹುದೆ?

ಅಷ್ಟಕ್ಕೂ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ದಾವೆ ಹೂಡಲು ಏಕೆ ಅನುಮತಿ ಕೊಟ್ಟರೆಂಬುದನ್ನು ಕನ್ನಡಪ್ರಭ ವಿಸ್ತ್ರತವಾಗಿ ಬರೆದಿದೆ, ಒಮ್ಮೆ ಓದಿ. ದಾವೆ ಹೂಡಲು ಅನುಮತಿ ಕೊಟ್ಟಿದ್ದು ಹೇಗೆ ಸರಿ ಎಂಬುದನ್ನು ವಿಜಯ ಕರ್ನಾಟಕದ ಇಂದಿನ ಮುಖಪುಟದಲ್ಲಿ ಪ್ರಕಟಗೊಂಡಿರುವ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರ ಸಂದರ್ಶನ ಹೇಳುತ್ತದೆ, ಅದನ್ನೂ ಒಮ್ಮೆ ಓದಿ.

ಮುಖ್ಯಮಂತ್ರಿಯ ವಿರುದ್ಧದ ಆರೋಪಗಳನ್ನು ಈಗಾಗಲೇ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಬಿ ಪದ್ಮರಾಜ ಆಯೋಗ ತನಿಖೆ ನಡೆಸುತ್ತಿದೆ ಎಂದು ದಂಡಾವತಿ ಬರೆಯುತ್ತಾರೆ.

ಕೆಲ ಆರೋಪಗಳು ಲೋಕಾಯುಕ್ತರ ಮುಂದೆ ದಾಖಲಾಗಿದ್ದು ನಿಜ. ಅವರು ತನಿಖೆ ಕೈಗೆತ್ತಿಕೊಳ್ಳುವ ಮೊದಲೇ, ಸರಕಾರ ಆಯೋಗವನ್ನು ನೇಮಿಸಿತು. ೧೯೯೫ ರಿಂದ ಕೇಳಿಬಂದಿರುವ ಆರೋಪಗಳನ್ನು ತನಿಖೆ ಮಾಡುವುದು ಆಯೋಗದ ಜವಾಬ್ದಾರಿ. ಲೋಕಾಯುಕ್ತರ ಮುಂದಿದ್ದ ಕೇಸುಗಳೂ ಆಯೋಗಕ್ಕೆ ವರ್ಗ ಆದವು. ಈ ಸಂದರ್ಭದಲ್ಲಿ ಯಡಿಯೂರಪ್ಪ ಜಾಣತನದಿಂದ ಜನತಾದಳದ ವೈಎಸ್‌ವಿ ದತ್ತ ತಮ್ಮ ವಿರುದ್ಧ ದೂರು ನೀಡಿದ ಹಿಂದಿನ ದಿನದವರೆಗಿನ ತನಿಖೆಗಳನ್ನು ಮಾತ್ರ ಲೋಕಾಯುಕ್ತಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದರು. ಸುಮಾರು ಐದು ವರ್ಷಗಳ ಕಾಲ ಕ್ರೈಮ್ ವರದಿಗಾರಿಕೆಯನ್ನೂ ಮಾಡಿದ್ದ ದಂಡಾವತಿಯವರಿಗೆ ಇದು ಗೊತ್ತಿಲ್ಲವೆ? ಹೀಗಿದ್ದೂ ಮುಖ್ಯಮಂತ್ರಿ ವಿರುದ್ಧದ ತನಿಖೆ ಲೋಕಾಯುಕ್ತರ ಮುಂದಿದೆ ಎಂದು ಏಕೆ ಬರೆಯುತ್ತಾರೆ? ಯಾರನ್ನು ಮಂಗ ಮಾಡುವ ಉದ್ದೇಶವಿದು?

ಇನ್ನು ನ್ಯಾಯಮೂರ್ತಿ ಪದ್ಮರಾಜ ಆಯೋಗದ ಮುಂದಿರುವುದು ಯಡಿಯೂರಪ್ಪನವರ ಪ್ರಕರಣಗಳು ಮಾತ್ರವಲ್ಲ. ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿಯವರ ಕಾಲದ ಪ್ರಕರಣಗಳೂ ಆ ಆಯೋಗದ ಮುಂದಿದೆ.

ಅದಲ್ಲದೆ ಲೋಕಾಯುಕ್ತರ ಮುಂದಿದ್ದ ಕೇಸುಗಳು ಆಯೋಗಕ್ಕೆ ವರ್ಗವಾದ ವಿಚಾರ ಕೋರ್ಟ್ ಮುಂದಿದೆ. ಆಯೋಗ ಯಾವುದೇ ಸಾಕ್ಷ್ಯ ದಾಖಲಿಸದಂತೆ ಹಾಗು ಮಧ್ಯಂತರ ಆದೇಶ ಹೊರಡಿಸದಂತೆ ಕೋರ್ಟ್ ಆದೇಶಿಸಿದೆ. ಹಾಗಾಗಿ ಸದ್ಯ ಆಯೋಗ ತನಿಖೆ ನಡೆಸುತ್ತಿಲ್ಲ ಎನ್ನವುದು ನಿರ್ವಿವಾದ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಎರಡು ದಿನಗಳಿಂದ ಸಾರಿ ಸಾರಿ ಹೇಳಿದ್ದಾರೆ: ಅವರು ಮುಖ್ಯಮಂತ್ರಿ ವಿರುದ್ಧ ಯಾವುದೇ ಕೇಸನ್ನೂ ತನಿಖೆ ಮಾಡುತ್ತಿಲ್ಲ. ಆದರೆ ಈ ದಂಡಾವತಿಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದು ಯಾರು? ಪತ್ರಿಕೆಗಳನ್ನು ಓದುವ ಅಭ್ಯಾಸ ಈ ಹಿರಿಯ ಪತ್ರಕರ್ತರಿಗಿಲ್ಲವೆ?

ನೆನಪಿರಲಿ. ಮುಖ್ಯಮಂತ್ರಿಯ ಕೆಲ ಕಾನೂನು ವಿರೋಧಿ ಕ್ರಮಗಳಿಂದ ಅನ್ಯಾಯ ಆಗಿರುವುದು ಬಡ ರೈತರಿಗೆ. ಸ್ವಾಧೀನಕ್ಕೆ ಗುರುತಿಸಿದ್ದ ಜಮೀನನ್ನು ಮೂಲ ಮಾಲೀಕರಾದ ಬಡ ರೈತರಿಂದ ಅಕ್ರಮವಾಗಿ ವಶಪಡಿಸಿಕೊಂಡು ಡಿನೋಟಿಫೈ ಮಾಡಿದ್ದು ಸರಿಯೇ? ಹೀಗೆ ಡಿನೋಟಿಫೈ ಮಾಡಲಾದ ಜಮೀನನ್ನು ತಮ್ಮ ಕರುಳ ಬಳ್ಳಿಗಳಿಗೆ ಕೊಟ್ಟಿದ್ದು ಸರಿಯೇ?

ತಪ್ಪುಗಳಾಗಿದ್ದರೆ ಶಿಕ್ಷೆ ಅನುಭವಿಸಲಿ ಬಿಡಿ. ನಿಮಗ್ಯಾಕೆ ದುಃಖ ದಂಡಾವತಿಯವರೆ? ಬಿಜೆಪಿಯಲ್ಲಿ ಇರುವವರಿಗೆ ಮರ್ಯಾದೆ ಇದ್ದರೆ ಈ ಭ್ರಷ್ಟ ಮುಖ್ಯಮಂತ್ರಿಯನ್ನು ಕೆಳಗಿಳಿಸಿ, ಪಕ್ಷ, ಅಧಿಕಾರ ಉಳಿಸಿಕೊಳ್ಳುತ್ತಾರೆ. ‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸುವ ಯತ್ನ ನಡೆಯುತ್ತಿದೆ ಎಂದೇಕೆ ರೋಧಿಸುತ್ತೀರಿ?

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಯಡಿಯೂರಪ್ಪನವರ ಅವ್ಯವಹಾರಗಳ ಬಗ್ಗೆ ಚಕಾರ ಎತ್ತದೆ ದಂಡಾವತಿ ಮತ್ತು ಪ್ರಜಾವಾಣಿ ಕಳ್ಳನನ್ನು ಬೆಂಬಲಿಸಿದ ಆರೋಪ ಎದುರಿಸಬೇಕೆ? ಪ್ರಜಾವಾಣಿ ಸಂಸ್ಥೆಯ ಮಾಲೀಕರಿಗೆ ಇದೆಲ್ಲ ಏನೂ ಅನ್ನಿಸುವುದಿಲ್ಲವೆ?

ಇವತ್ತಿಗೂ ಕಾಡುವ ಗಂಭೀರವಾದ ಪ್ರಶ್ನೆ ಏನೆಂದರೆ  ಡಿನೋಟಿಫಿಕೇಷನ್ ದಂಧೆಯ ಕುರಿತು ಪ್ರಜಾವಾಣಿ ಏಕೆ ಮೃದುವಾಗಿದೆ?

ಕೊನೆ ಕುಟುಕು: ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮ ಅಂಕಣ ಬರಹದ ಎರಡು ಪುಸ್ತಕಗಳು ಈ ವಾರ ಬಿಡುಗಡೆಯಾಗಲಿವೆ. ಸಾಹಿತಿ ಚಂದ್ರಶೇಖರ ಕಂಬಾರ ಕೃತಿಗಳನ್ನು ಬಿಡುಗಡೆ ಮಾಡುತ್ತಾರೆ. ಪ್ರಜಾವಾಣಿ ಸಂಪಾದಕ ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಕಾರ್ಯಕ್ರಮದ ಅತಿಥಿಗಳು. ಕೃತಿಗಳ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.

READ MORE - ಘನತೆವೆತ್ತ ಸಂಪಾದಕರೇ, ಇದು ನ್ಯಾಯನಿಷ್ಠುರ ಲೇಖನ ಅಲ್ಲ

ಸ್ವಲ್ಪ ಫಾಲೋ ಅಪ್ ಮಾಡ್ತೀರಾ ಸರ್ ಎಂದು ರಾಜ್ಯದ ಮಾಧ್ಯಮ ಲೋಕದ ದಿಗ್ಗಜರನ್ನು ಮನವಿ ಮಾಡಿಕೊಂಡಿದ್ದೆವು. ಆದರೆ ಯಾರೂ ಫಾಲೋ ಅಪ್ ಮಾಡಿದ ಹಾಗೆ ಕಾಣುತ್ತಿಲ್ಲ. ಹೀಗಾಗಿ ಸಂಪಾದಕೀಯ ತಂಡವೇ ಸುದ್ದಿಯ ಆಳ-ಅಗಲವನ್ನು ಕೆದಕಿ ಮಾಹಿತಿಗಳನ್ನು ಸಂಗ್ರಹಿಸಿದೆ. ಅದನ್ನು ಓದುಗರ ಮುಂದೆ ಇಡುತ್ತಿದ್ದೇವೆ.

ನಾವು ಹೇಳುತ್ತಾ ಇರುವುದು ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅದಿರು ಹರಾಜಿನ ವಿಷಯ. ಇದನ್ನು ಓದುವ ಮುನ್ನ ನಮ್ಮ ಹಳೆಯ ಪೋಸ್ಟ್ ಅದಿರು ಮಾಯ-ಸುದ್ದಿ ಮಂಗಮಾಯವನ್ನು ಮತ್ತೊಮ್ಮೆ ಓದಿ ಬನ್ನಿ.

ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಪ್ರೈ. ಲಿ. ಸಂಸ್ಥೆಗೆ ಅತ್ಯಂತ ಕಡಿಮೆ ಬೆಲೆಯ ಹರಾಜಿನ ಕುರಿತು ಹೈಕೋರ್ಟ್‌ನಲ್ಲಿ ಓರ್ವರು ಆಕ್ಷೇಪ ಎತ್ತಿದ ಪರಿಣಾಮ ನ್ಯಾಯಾಲಯ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು, ನಂತರ ಅದು ತೆರವು ಸಹ ಆಯಿತು. ಅದಾದ ನಂತರ ಏನಾಯಿತು ಎಂಬುದೇ ಸಾಕಷ್ಟು  ಕುತೂಹಲಕರವಾಗಿದೆ.

ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಪ್ರೈ. ಲಿ. ಸಂಸ್ಥೆ ೧೮ ಕೋಟಿ ರೂ.ಗಳಿಗೆ ಹರಾಜು ಪಡೆದಿದ್ದೇನೋ ನಿಜ. ಇದಕ್ಕಾಗಿ ಮೊದಲ ಕಂತಾಗಿ ಶೇ.೨೫ರಷ್ಟು ಹಣ ಅಂದರೆ, ೪,೭೦,೯೬,೫೦೦ ರೂ.ಗಳನ್ನು ಪಾವತಿಸಿತ್ತು. ಇನ್ನೂ ಮೂರು ಕಂತುಗಳಲ್ಲಿ ಬಾಕಿ ಹಣವನ್ನು ಪಾವತಿಸಬೇಕಿತ್ತು.

ಆದರೆ ಸಂಗ್ರಹಿಸಿಡಲಾಗಿದ್ದ ಅದಿರಿನ ಪೈಕಿ ಅರ್ಧಕ್ಕೂ ಹೆಚ್ಚು (ಸಿಓಡಿ ತನಿಖೆಯೇ ಇದನ್ನು ಹೇಳಿದೆ.) ನಾಪತ್ತೆಯಾಗಿತ್ತು. ಪೂರ್ತಿ ಅದಿರು ದೊರೆಯುವವರೆಗೂ ಉಳಿದ ಹಣವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿತು. ಆದರೆ ಸರಿಯಾದ ಅವಧಿಯಲ್ಲಿ ಕಂತು ಪಾವತಿಸಲಿಲ್ಲ ಎಂಬ ಕಾರಣಕ್ಕೆ ಹರಾಜನ್ನು ರದ್ದುಗೊಳಿಸಿ ಹೊಸದಾಗಿ ಹರಾಜು ನಡೆಸಲು ಅಧಿಕಾರಿಗಳು ನಿರ್ಧರಿಸಿದರು. ಈ ಸಂಬಂಧ ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಸಂಸ್ಥೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ದಾವೆ ಹೂಡಿತು. ರಿಟ್ ಪಿಟಿಷನ್ ಸಂಖ್ಯೆ 5124/ 2010(GM-MM-S)

ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದವರು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳು, ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಆಯುಕ್ತರೂ ಆಗಿರುವ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಹಾಗು ಗಣಿ ಮತ್ತು ಭೂವಿಜ್ಞಾನ ಇಲಾಖೆ ಬಳ್ಳಾರಿ ಜಿಲ್ಲೆಯ ಉಪ ನಿರ್ದೇಶಕರು.

ಅದಿರು ಕಳ್ಳತನವಾಗಿರುವುದನ್ನು ಮುಚ್ಚಿಹಾಕಲು ಮರುಹರಾಜು ನಡೆಸಲು ಯತ್ನಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದರು. ಅದಿರು ನಾಪತ್ತೆ ಪ್ರಕರಣದ ಸತ್ಯಾಂಶಗಳನ್ನು ಅರಿಯಲು ನ್ಯಾಯಾಲಯದ ಆದೇಶದ ಮೇರೆಗೆ ಸಿಓಡಿ ತನಿಖೆಯೂ ನಡೆಯಿತು.

ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಮತ್ತು ಬಿ.ಎಸ್.ಪಾಟೀಲ ಅವರನ್ನು ಒಳಗೊಂಡ ವಿಭಾಗೀಯ ಪೀಠ ೨೦೧೦ರ ಫೆಬ್ರವರಿ ೧೯ರಂದು ತೀರ್ಪನ್ನು ನೀಡಿತು.

ಹೈಕೋರ್ಟ್ ವಿಭಾಗೀಯ ಪೀಠದ ಅಂತಿಮ ಆದೇಶದಲ್ಲಿ ಸಿಓಡಿ ತನಿಖೆ ವರದಿಯ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ:


...It is clear from the previous proceedings and from terms of the report filed by the COD referred to in the previous order passed by this court that considerable quantity is missing from the iron ore stacked in the lands.... (Page No.8)


...As regards the huge quantity of iron ore stacked in different lands found missing. we would like to make it clear that the authorities are duty bound to examine as to under what circumstances such lapse took place. In the light of the report submitted by the COD, we direct the Director of Mines and Geology, based on the exact quantity of material that will be auctioned in the proposed auction, to find out how much material falls short compared to what was stacked earlier and auctioned previously. The responsibility has to be fixed with regard to the missing quantity by conductiong necessary enquiry agaisnt the authorities and persons concerned....... (Page No. 8 & 9)


ಇಷ್ಟು ದೊಡ್ಡ ಪ್ರಮಾಣದ ಅದಿರು ನಾಪತ್ತೆಯಾಗಿರುವುದು ನಿಜ ಎಂಬುದು ಸಿಓಡಿ ತನಿಖೆಯಿಂದೇನೋ ಬಯಲಾಗಿದೆ. ಇಂಥ ದೊಡ್ಡ ಪ್ರಮಾದ ನಡೆಯಲು ಕಾರಣಕರ್ತರಾದ, ಜವಾಬ್ದಾರಿ ಹೊರಬೇಕಾದವರ ಮೇಲೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವೂ ಆದೇಶಿಸಿದೆ.

ಕದ್ದವರು ಯಾರು? ಕದ್ದವರಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು ಯಾರು?  ಇನ್ನೂ ಬಯಲಾಗಿಲ್ಲ. ಚಿತ್ರಕೂಟ ಸಂಸ್ಥೆಗೇನೋ ತಾನು ಕಟ್ಟಿದ್ದ ಮೊದಲ ಕಂತಿನ ಹಣ ನ್ಯಾಯಾಲಯದ ಆದೇಶದಿಂದಾಗಿ ವಾಪಾಸು ದೊರೆತಿದೆ.

ಆದರೆ ಮಾಯವಾದ ಅದಿರಿನ ಕಥೆ? ಅದಕ್ಕೆ ಉತ್ತರದಾಯಿಗಳು ಯಾರು?

ಹೊಟ್ಟೆಪಾಡಿಗಾಗಿ ಮನೆಗಳ್ಳತನ ಮಾಡುವವನನ್ನು ಹಿಡಿದರೆ ಅದು ಸುದ್ದಿಯಾಗುತ್ತದೆ, ಅವನಿಗೆ ಜೈಲೂ ಆಗುತ್ತದೆ. ಕೋಟಿಗಟ್ಟಲೆ ನುಂಗಿದವರು ಆರಾಮವಾಗಿ ಇರುತ್ತಾರೆ. ಈ ಪ್ರಕರಣದಲ್ಲಿ ಅದು ಗಂಭೀರವಾದ ಸುದ್ದಿಯೂ ಆಗಲಿಲ್ಲ. ಇದು ಅತ್ಯಂತ ನೋವಿನ ವಿಚಾರ.
READ MORE - ಅದಿರು ಕಳ್ಳತನ: ಪೂರ್ತಿ ಡೀಟೇಲ್ಸ್ ಇಲ್ಲಿದೆ...
On Friday, January 21, 2011 at 6:39 AM, 5 Companies of Los Angeles Firefighters, 2 LAFD Rescue Ambulances, 1 EMS Battalion Captain and 1 Battalion Chief Officer Command Team, a total of 32 Los Angeles Firefighters under the direction of Battalion Chief Joseph Klein, responded to a Structure Fire at 1324 Sutherland Street in Echo Park.

Los Angeles Firefighters arrived quickly to find heavy fire showing from a 1,412 square-foot hillside single family home.



Navigating through a slim curbside gate and trio of narrow outside staircases to gain access, firefighters muscled hoselines and later ground ladders to battle intense flames that had taken hold of the front portion of a 106-year-old wood frame structure.

As the aggressive fire attack ensued, firefighters were pleased to learn that the home's five occupants had exited the building with minimal injury, prior to the Fire Department's arrival.

One of the residents however, had foolishly reentered the building in an attempt to reclaim possessions, sustaining smoke inhalation as well as first-degree burns to his neck and arms. In good condition following treatment by LAFD Paramedics, the man declined ambulance transport before being released at the scene.

Despite the diligent efforts of 32 Los Angeles Firefighters, one pet cat perished in the blaze. The well-coordinated assault on the flames held direct fire damage to a large front patio, adjacent bedroom, attic and dormer, with firefighters bringing flames under full control in just 17 minutes.

No other injuries were reported.

The three men and two women who lived separately within the home escaped only with their night clothes. They were assisted with temporary housing and human needs by volunteers from the American Red Cross.

There was no immediate evidence of functional smoke alarms within the home, as required by law. Firefighters later determined that the home's occupants owed their survival solely to the happenstance that one resident was awakened by the sound of fire, and was able to alert others.

Loss to the non-fire sprinklered home is estimated at $95,000 ($75,000 structure & $20,000 contents). The cause of this early morning blaze is categorized as accidental, and attributed to the careless discarding of smoking materials on the patio that ignited combustible furnishings.

(video)

Submitted by Brian Humphrey, Spokesman
Los Angeles Fire Department
READ MORE - Five Echo Park Residents Narrowly Escape Inferno
On Friday, January 21, 2011 at 3:57 AM, 10 Companies of Los Angeles Firefighters, 6 LAFD Rescue Ambulances, 1 Heavy Rescue, 1 Urban Search and Rescue Unit, 1 Hazardous Materials Team, 2 EMS Battalion Captains, 4 Battalion Chief Officer Command Teams and 1 Division Chief Officer Command Team, a total of 84 Los Angeles Fire Department personnel under the direction of Battalion Chief Craig Yoder, responded to a Confined Space Rescue at 4501 West Colorado Boulevard in the Atwater Village area of Los Angeles.

Responding to a report of persons unconscious within the 269,000 square-foot Baxter Healthcare Corporation blood plasma fractionation facility, first arriving Los Angeles Firefighters swiftly established a perimeter, command post and safe staging location as they donned protective gear to enter the facility.



Joined quickly by additional firefighters, and with an LAFD Hazardous Materials Squad and LAFD Urban Search & Rescue Team on the way, firefighters discovered and rescued an adult male found pulseless and non-breathing.

Nearby the man, but trapped within the confines of a cylindrical vessel, firefighters discovered a pair of his coworkers unconscious.

According to witnesses, the three men had been cleaning and/or maintaining high-technology medical equipment when they were suddenly overcome. The exact sequence in which the men collapsed has yet to be confirmed.

As LAFD personnel moved the first lifeless worker to an area of safety for advanced medical care, firefighters utilized strength and ingenuity to safely extract the pair of unconscious men through a 24" diameter portal atop the permanently mounted four-foot-tall by five-foot-wide tank in which they were imperiled.

The two critically ill men rescued from the tank, and their gravely ill colleague - who had his pulse and blood pressure restored by the skilled effort of LAFD Paramedics - were rushed alive to a trio of nearby hospitals. Though Los Angeles Police Officers later informed LAFD that one of the men had died, it was not immediately clear which had succumbed.

While LAFD Hazardous Materials experts determined a significant presence of ethanol in the area where the men collapsed, it was not immediately clear what role the substance had played, in whole or in part, in the worker's demise or his colleague's being rendered unconscious.

No other employee or responder injuries were reported.

Pursuant of protocol, Investigators from the Los Angeles Police Department and Cal/OSHA responded to the scene to commence their respective death and injury investigations. The aforementioned agencies will be working closely with the Los Angeles County Department of Coroner to positively identify the decedent, and to determine the precise cause, time and manner of his death.

Questions regarding the presence, need or injured men's use of safety equipment and approved worksite procedures remain within the purview of Cal/OSHA officials.

(video)

Submitted by Erik Scott and Brian Humphrey, Spokesmen
Los Angeles Fire Department
READ MORE - LAFD Performs Confined Space Rescue at Atwater Village Medical Firm

ಇದು ಪ್ರಜಾವಾಣಿಯ ಇಂದಿನ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಪಿ. ಮಹಮದ್ ಅವರ ಚಿನಕುರುಳಿ ಪಂಚ್. ರಾಜಕಾರಣಿಗಳು ತಮ್ಮ ಸ್ಥಾನಕ್ಕೆ, ಮಾನಕ್ಕೆ ಧಕ್ಕೆಯಾದಾಗಲೆಲ್ಲ ಇದು ಇಡೀ ರಾಜ್ಯದ ಜನತೆಗೆ ಆದ ಅವಮಾನ ಎಂದು ಹೇಳಿಕೊಳ್ಳುವುದು ಮಾಮೂಲು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ಇಬ್ಬರು ವಕೀಲರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿರುವುದು ನಿಜಕ್ಕೂ ರಾಜ್ಯದ ಆರು ಕೋಟಿ ಜನತೆಗೆ ಅವಮಾನ ಮಾಡಿದಂತಾಗಿದೆಯೇ?

ನಮಗಂತೂ ಹಾಗನ್ನಿಸುತ್ತಿಲ್ಲ, ನಿಮಗೆ?
READ MORE - ಆರು ಕೋಟಿ ಕನ್ನಡಿಗರಿಗೆ ಅವಮಾನವಾಗಿದೆಯೇ?

ಇವತ್ತಿನ ಕನ್ನಡಪ್ರಭ ಮುಖಪುಟದ ಒಂದು ಸುದ್ದಿಯ ಶೀರ್ಷಿಕೆ: ಖಾಸಗಿ ಕಂಪನಿಗಳಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಜಾಗವೇ ಇಲ್ಲ.

ನಿಜ, ಖಾಸಗಿ ಸಂಸ್ಥೆಗಳಲ್ಲಿ ದಲಿತರಿಗೆ ಕೊಡಲಾಗುವ ಅವಕಾಶ ಅಷ್ಟಕ್ಕಷ್ಟೆ. ಇದು ಗೊತ್ತಿರುವ ವಿಷಯವೇ. ಈ ಕುರಿತ ಅಂಕಿಅಂಶಗಳನ್ನು ಕನ್ನಡಪ್ರಭ ಪ್ರಕಟಿಸಿದೆ.

ಆದರೆ ಮೀಡಿಯಾಗಳೆಂಬ ಖಾಸಗಿ ಸಂಸ್ಥೆಗಳು ಏನು ಮಾಡುತ್ತಿವೆ? ಮೀಡಿಯಾಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಏನಾದರೂ ಅರ್ಥ ಉಳಿದಿದೆಯೇ? ಬಹುಸಂಸ್ಕೃತಿಗಳ ಈ ನೆಲದಲ್ಲಿ ಸಣ್ಣಪುಟ್ಟ ಸಮುದಾಯಗಳ, ತಿರಸ್ಕೃತ ಸಮಾಜಗಳ ಅಭಿವ್ಯಕ್ತಿಯನ್ನು ಧ್ವನಿಸುವಂಥವರು ಮೀಡಿಯಾಗಳಲ್ಲಿ ಎಷ್ಟು ಮಂದಿ ಇದ್ದಾರೆ? ಬಹುಸಂಖ್ಯಾತ ಜನರ ಸಂವೇದನೆಗಳೆಲ್ಲ ನಮ್ಮ ಮೀಡಿಯಾಗಳಿಗೆ ನಗಣ್ಯ ಆಗಿರುವುದು ನಿಜವಲ್ಲವೆ?

ಸುಮ್ಮನೆ ಕನ್ನಡ ಮಾಧ್ಯಮಲೋಕದತ್ತ ಒಂದು ನೋಟ ಚೆಲ್ಲಿ. ಕನ್ನಡ ಮೀಡಿಯಾಗಳಲ್ಲಿ ಇರುವ ದಲಿತರ ಸಂಖ್ಯೆ ಎಷ್ಟು? ಸಂಪಾದಕರುಗಳಲ್ಲಿ ಬ್ರಾಹ್ಮಣೇತರರ ಸಂಖ್ಯೆ ಎಷ್ಟು? ಮುಸಲ್ಮಾನ ವರದಿಗಾರರು ಇದ್ದಾರೆಯೇ? ಇದ್ದರೆ ಅವರ ಪ್ರಮಾಣ ಎಷ್ಟು? ತಿಗಳ, ಕೊರಚ, ಕಮ್ಮಾರ, ಹೊಲೆಯ, ಮಾದಿಗ, ದೊಂಬರ, ಹಕ್ಕಿಪಿಕ್ಕಿ,... ಹೀಗೆ ನಾನಾ ಹಿಂದುಳಿದ ವರ್ಗಗಳ ಹುಡುಗ/ಹುಡುಗಿಯರು ಪತ್ರಿಕೋದ್ಯಮದಲ್ಲಿ ಎಲ್ಲಾದರೂ ಸಿಕ್ತಾರ?

ಯಾರಾದರೂ ಈ ಕುರಿತು ಒಂದು ಅಧ್ಯಯನ ನಡೆಸಿದ್ದಾರಾ?

ಇಂಥ ಪ್ರಶ್ನೆಗಳನ್ನು ಎತ್ತಿದ ತಕ್ಷಣ ಮೀಡಿಯಾಗಳಲ್ಲೂ ಜಾತಿ ಲೆಕ್ಕಾಚಾರನಾ? ಎಂದು ಟೀಕಿಸುವವರು ಇದ್ದೇ ಇರುತ್ತಾರೆ. ಹೀಗೆ ಹೇಳುವವರು ಒಳಗಿಂದೊಳಗೆ ಮಹಾನ್ ಜಾತಿವಾದಿಯಾಗಿರುತ್ತಾರೆ. ಅರಮನೆ ಮೈದಾನದಲ್ಲಿ ನಡೆಯುವ ಗಾಯತ್ರಿ ಸಹಸ್ರನಾಮ ಉತ್ಸವಕ್ಕೆ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರ ಎತ್ತಿನ ಹಬ್ಬಕ್ಕೋ, ಮಾರಮ್ಮನ ಜಾತ್ರೆಗೋ ಯಾಕೆ ಸಿಕ್ಕುವುದಿಲ್ಲ? ಈ ಬಗ್ಗೆ ಯಾರಾದರೂ ಗಂಭೀರವಾಗಿ ಚಿಂತಿಸಿದ್ದಾರೆಯೇ?

ರಾಜ್ಯದ ಸಮಸ್ತರನ್ನು ಪ್ರತಿನಿಧಿಸಬೇಕಿರುವ ಪತ್ರಿಕೆ, ಮಾಧ್ಯಮಗಳು ಕೆಲವೇ ಕೆಲವು ಜಾತಿಗಳ ಸ್ವತ್ತಾಗಿರುವುದು ಅಪಾಯಕಾರಿ. ಜಾತಿ ಈ ದೇಶದಿಂದ ತೊಲಗಬೇಕು ಎಂಬುದು ಆದರ್ಶ, ಜಾತಿ ಇದೆ ಎಂಬುದು ಸತ್ಯ ಮತ್ತು ವಾಸ್ತವ. ಪ್ರತಿ ಜಾತಿಗೂ ಒಂದು ಭಿನ್ನ ಸಾಮಾಜಿಕ ಹಿನ್ನೆಲೆ ಇದೆ. ಮಾಧ್ಯಮ ಕೂಡಾ ಎಲ್ಲರನ್ನೂ ಪ್ರತಿನಿಧಿಸುವಂತಾದಾಗ ಮಾತ್ರ ಅದು ನಿಜ ಅರ್ಥದಲ್ಲಿ ಸಮೂಹ ಮಾಧ್ಯಮ.

ಈಗ ಮಾಧ್ಯಮ ರಂಗದಲ್ಲಿ ಅವಕಾಶ ಗಿಟ್ಟಿಸಿರುವವರು ಅನರ್ಹರು ಎಂಬ ಅಭಿಪ್ರಾಯ ನಮ್ಮದಲ್ಲ. ಆದರೆ ಇತರ ಸಮುದಾಯಗಳ ಅರ್ಹರನ್ನು ಹುಡುಕಿ ತಂದು ಅವಕಾಶ ನೀಡದೇ ಹೋದಲ್ಲಿ ಸಂವಿಧಾನದ ನಾಲ್ಕನೇ ಅಂಗ ಎನಿಸಿಕೊಳ್ಳುವ ಮಾಧ್ಯಮ ರಂಗ ಹೆಚ್ಚು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕಾರ್ಯನಿರ್ವಹಿಸುವುದು ಅಸಾಧ್ಯ.

ಈ ಬಗ್ಗೆ ಹೆಚ್ಚು ಆಲೋಚನೆಗೆ ಹಚ್ಚುವ ಲೇಖನವೊಂದನ್ನು ಭಾರತದ ಪ್ರತಿಭಾವಂತ ಪರ್ತಕರ್ತ ಸಿದ್ಧಾರ್ಥ ವರದರಾಜನ್ ಈಗ್ಗೆ ಐದು ವರ್ಷಗಳ ಹಿಂದೆ ದಿ ಹಿಂದೂ ಪತ್ರಿಕೆಯಲ್ಲಿ ಬರೆದಿದ್ದರು. ಈ ಲೇಖನ ಇಂದಿನ ಮಾಧ್ಯಮರಂಗ ನಿರ್ವಹಿಸಬೇಕಿರುವ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ವರದರಾಜನ್ ಸದ್ಯ ದಿ ಹಿಂದೂ ಪತ್ರಿಕೆಯ ದೆಹಲಿ ಬ್ಯೂರೋ ಮುಖ್ಯಸ್ಥ. ಈ ಹಿಂದೆ ಇವರ ಸ್ಥಾನದಲ್ಲಿದ್ದ ಹರೀಶ್ ಖರೆ ಈಗ ಪ್ರಧಾನ ಮಂತ್ರಿಯವರ ಮಾಧ್ಯಮ ಸಲಹೆಗಾರರು. ವರದರಾಜನ್ ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಅವರ ಆಸಕ್ತಿಯ ಕ್ಷೇತ್ರ ಹಲವು - ಮುಖ್ಯವಾದದ್ದು ವಿದೇಶಾಂಗ ವ್ಯವಹಾರ.

ವರದರಾಜನ್ ಅವರದೊಂದು ಬ್ಲಾಗ್ ಕೂಡ ಇದೆ. ಅವರು ವಿದೇಶದಲ್ಲಿ ಕಲಿತವರು ಮತ್ತು ಕಲಿಸಿದವರು. ಭಾರತದ ಬೇರುಗಳನ್ನು ಚೆನ್ನಾಗಿ ಬಲ್ಲವರು. ಇವರ ಸಹೋದರ ಟುಂಕು ವರದರಾಜನ್ ಅಮೆರಿಕಾ ಮೂಲದ ನ್ಯೂಸ್ ವೀಕ್ ಪತ್ರಿಕೆ ಅಂತಾರಾಷ್ಟ್ರೀಯ ಸಂಪಾದಕ. ಒಮ್ಮೆ ವರದರಾಜನ್ ಅವರ ಬ್ಲಾಗ್  Reality, one bite at a timeಗೆ ಹೋಗಿ ಬನ್ನಿ.


READ MORE - ಮೀಡಿಯಾಗಳಲ್ಲೂ ಸಾಮಾಜಿಕ ನ್ಯಾಯ ಇರಬೇಕಲ್ಲವೆ?
On Thursday, January 20, 2011 at 9:23 PM, 12 Companies of Los Angeles Firefighters, 4 LAFD Rescue Ambulances, 1 Arson Unit, 1 Urban Search and Rescue Unit, 4 Hazardous Materials Teams, 1 EMS Battalion Captain, 4 Battalion Chief Officer Command Teams, 1 Division Chief Officer Command Team, Department of Transportation, LAPD, Building & Safety, and 1 Rehab Air Tender under the direction of Assistant Chief Jeffery S. Mottram responded to a Greater Alarm Structure Fire at 14435 West Sherman Way in Van Nuys.

Firefighters arrived to find a large, two-story strip-mall with smoke showing from the roof. The 300' X 25' building contained multiple individual business that were closed for the evening.

Firefighters made forcible entry through glass doors into the building to allow Fire Attack teams inside. Simultaneously, Firefighters swiftly took to the lightweight panelized roof to perform vertical ventilation of intense heat and smoke.

Handlines were rapidly deployed inside and a search began to find the source of the smoke, however it proved to be a challenge. Flames were located in the walls on the second floor, toward the rear of the building. Fire discreetly climbed up the walls and viciously spread into a common attic space.

The first arriving 75 firefighters extinguished the bulk of the fire in 34 minutes. However the coordinated effort of 100 firefighters battled continual flare-ups in various locations for over two hours.

No civilians were injured. One firefighter suffered a minor hand injury and was transported to a local hospital in good condition.

Individuals from Building and Safety along with LAFD's Urban Search and Rescue Team evaluated the building for structural stability.

The cause of the fire remains under active investigation, and the dollar loss is still being tabulated.

(photos)

Submitted by Erik Scott, Spokesman
Los Angeles Fire Department
READ MORE - Firefighters Extinguish Difficult Commercial Building Fire in Van Nuys
On Thursday, January 20, 2011 at 9:00 AM, Los Angeles Firefighters quickly responded to a reported Structure Fire in Valley Glen. Upon making entry into an apartment unit, they found a kitchen fire that had already been extinguished. Unfortunately, an adult female suffered critical burns to her face, neck and arms while in the kitchen. When attempting to help, the victim's husband suffered moderate burn injuries to his hands.

The Los Angeles Fire Department and the National Fire Protection Association would like to share some staggering statistics:

Each year approximately 3,000 Americans die as a result of home fires and burns, and more than 200,000 are seen in our nation’s emergency rooms for burn injuries.

Burn injuries are commonly caused by flame, scalds or contact with a hot surface. Burns are painful and can result in serious disability, disfigurement - even death.

Most importantly, burns are preventable...
  • Turn pot and pan handles away from the front of your stove, and use the rear burners when possible.
  • Maintain a 3-foot 'kid-free' zone around your stove and wear short or close-fitting sleeves when cooking.
  • Keep hot foods and liquids away from tables and counter edges so they cannot be pulled or knocked over.
  • Never hold a child in your arms while preparing hot food or drinking a hot beverage.
  • Use extreme caution with items that get hot such as curling irons, oven, irons, lamps, heaters.
  • Never leave a child alone in a room with a lit candle, portable heater, lit fireplace or stove, or where a hot appliance might be in use.
Sadly, today a woman is in the hospital fighting for her life. By using the tips above, you and your loved ones can greatly reduce the chance of receiving a serious burn injury.

Submitted by Erik Scott, Spokesman
Los Angeles Fire Department
READ MORE - Kitchen Fire Critically Burns Woman In Valley Glen

ಕಾಂಗ್ರೆಸ್ ಪಕ್ಷದಲ್ಲಿ ಮೂಲನಿವಾಸಿಗಳು-ವಲಸಿಗರು ಎಂಬ ಕಾಳಗ ನಿಮಗೆ ಗೊತ್ತೇ ಇದೆ. ಈ ತರಹದ ಜಗಳ ಪತ್ರಿಕಾ ಕಚೇರಿಗಳಲ್ಲೂ ಇದೆ ಎಂದರೆ ನೀವು ನಂಬಬೇಕು. ಸಂಯುಕ್ತ ಕರ್ನಾಟಕದಲ್ಲಿ ಈ ಯುದ್ಧ ಜಾರಿಯಲ್ಲಿದೆ.

ಲೇಟೆಸ್ಟ್ ಸುದ್ದಿ ಏನೆಂದರೆ ಹಿರಿಯ ಪತ್ರಕರ್ತೆ ಸಾವಿತ್ರಿ ಸಂಯುಕ್ತ ಕರ್ನಾಟಕ ತೊರೆದಿದ್ದಾರೆ. ಹಲವು ವರ್ಷಗಳಿಂದ ಅವರು ಸಂಕದಲ್ಲಿದ್ದರು. ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರು ಮಾಡಿದವರು ಸಾವಿತ್ರಿ.  ಪತ್ರಿಕೆ ಬಿಟ್ಟು ಹೋಗುವುದಕ್ಕೆ ಒಳಗಿನ ಜಗಳಗಳು, ಮನಸ್ತಾಪಗಳೇ ಕಾರಣವಾದವೇ?

ಇದೆಲ್ಲ ಶುರುವಾಗಿದ್ದು ಸಂಕವನ್ನು ಹೊಸ ವಿನ್ಯಾಸದಲ್ಲಿ ರೀಲಾಂಚ್ ಮಾಡಲು ಅದರ ಸಂಪಾದಕ ರಾಜನ್ ಪ್ರಯತ್ನಿಸಲು ಆರಂಭಿಸಿದಾಗ. ಎಲ್ಲ ಪತ್ರಿಕೆಗಳು, ಅದರಲ್ಲೂ ವಿಶೇಷವಾಗಿ ಹೊಸದಿಗಂತದಂಥ ಪತ್ರಿಕೆಯೇ ಹೊಸ ವಿನ್ಯಾಸದೊಂದಿಗೆ ಮೂಡಿಬರುತ್ತಿರುವಾಗ ಸಂಕಗೂ ಒಂದು ರೂಪವನ್ನು ಕೊಡಲು ರಾಜನ್ ಯತ್ನಿಸಿದರು. ಇದು ಹಳಬರನ್ನು ಕಟ್ಟಿಕೊಂಡು ಹೂಡುವ ಆಟವಲ್ಲ ಎಂಬುದು ಅವರಿಗೂ ಗೊತ್ತಿತ್ತು. ಹೀಗಾಗಿ ಒಂದಷ್ಟು ಹೊಸಬರು ಬಂದರು. ಶುರುವಾಯ್ತು ಕದನ.

ಈ ನಡುವೆ ವಾರಪತ್ರಿಕೆಯೊಂದರಲ್ಲಿ ಸಂಕದ ಕೆಲವು ಅವ್ಯವಹಾರಗಳ ಕುರಿತು ವರದಿಯೂ ಬಂತು. ಮಾಹಿತಿ ಕೊಟ್ಟವರು ಒಳಗಿನವರೇ ಎಂಬ ಅಂಶ ಬಯಲಾಯ್ತು. ನಂತರ ಹಳಬರು ಒಂದು ಸಿಗ್ನೇಚರ್ ಕ್ಯಾಂಪೇನ್ ನಡೆಸಿದರು. ಕಾರ್ಯದರ್ಶಿ (ನಾರಾಯಣಮೂರ್ತಿ) ಹಾಗು ಸಂಪಾದಕರನ್ನು ಬದಲಾಯಿಸಬೇಕು ಎಂಬುದು ಅವರ ಬೇಡಿಕೆ. ಸಾಕಷ್ಟು ಸಹಿಗಳು ಸಂಗ್ರಹಗೊಂಡವು. ಲೋಕಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಆದರೆ ಇದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.

ಇದೆಲ್ಲವೂ ಸಂಕದಲ್ಲಿ ಆಂತರಿಕ ಸಂಘರ್ಷವನ್ನು ಹುಟ್ಟುಹಾಕಿತ್ತು. ಪತ್ರಿಕೆಗೆ ಹೊಸ ರೂಪ ಕೊಡಲು ರಾಜನ್ ಹೆಣಗಾಡಿದರೂ, ಹಲವರ ಅಸಹಕಾರದಿಂದಾಗಿ ಅದು ಹಳೇ ಮುದುಕಿಗೆ ಸೀರೆ ಉಡಿಸಿದಂತಾಯ್ತು, ಅಷ್ಟೆ.

ಇನ್ನು ತಮ್ಮ ವಿರುದ್ಧ ದೂರು ಕೊಟ್ಟವರ ವಿರುದ್ಧ ಕಾರ್ಯದರ್ಶಿಗಳು ರಾಂಗಾಗಿದ್ದರು. ಕೆಲವು ಬದಲಾವಣೆಗಳೂ ಆದವು. ಹಳಬರ ಪೈಕಿ ಜೋಷಿಯವರನ್ನು ಮಂಗಳೂರಿಗೆ ವರ್ಗಾಯಿಸಲಾಯಿತು. ನಂತರ ಅಲ್ಲಿಂದ ದಾವಣಗೆರೆಗೆ ಕಳುಹಿಸಲಾಯಿತು. ವರದಿಗಾರ್ತಿ ಭುವನೇಶ್ವರಿಯನ್ನು ಸಿಂಧೂರ ಸಪ್ಲಿಮೆಂಟ್‌ಗೆ ಹಾಕಲಾಯಿತು. ಆಕೆ ಬೇಸರದಿಂದ ರಾಜೀನಾಮೆ ಕೊಟ್ಟು ಹೋದರು. ಸಿಂಧೂರ, ಸಿನಿಮಾ ಸಪ್ಲಿಮೆಂಟುಗಳಲ್ಲಿದ್ದ ಸಾವಿತ್ರಿಯವರಿಗೆ ಕೃಷಿ ಪುರವಣಿಯ ಜವಾಬ್ದಾರಿ ಹೊರಿಸಲಾಯಿತು. ಈಗ ಸಾವಿತ್ರಿ ಕೂಡ ಪತ್ರಿಕೆ ತೊರೆದಿದ್ದಾರೆ.

ಹಳಬರ ಮತ್ತು ಹೊಸಬರ ನಡುವೆ ಕಂದಕ ಸೃಷ್ಟಿ ಮಾಡಿದ್ದೀರಿ ಎಂದು ಆಗಾಗ ಎಡಿಟೋರಿಯಲ್ ಮೀಟಿಂಗುಗಳಲ್ಲಿ ಆರ್ಭಟಿಸುತ್ತಿದ್ದ ಮತ್ತೊಬ್ಬ ವರದಿಗಾರರನ್ನು ಬೇರೊಂದು ಜಿಲ್ಲೆಗೆ ಸಾಗಹಾಕುವ ಯತ್ನಗಳೂ ನಡೆದಿವೆ.

ಒಟ್ಟಿನಲ್ಲಿ ಸಂಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನಂತೂ ಈ ಬೆಳವಣಿಗೆಗಳು ಹೇಳುತ್ತಿವೆ.

*******

ಉದಯವಾಣಿ ಬೆಂಗಳೂರು ಆವೃತ್ತಿಯ ಸರ್ವ ಸಿಬ್ಬಂದಿ ಇನ್ನು ಮುಂದೆ ರಜೆ ಬೇಕೆಂದರೆ ಸಂಪಾದಕ ತಿಮ್ಮಪ್ಪ ಭಟ್ಟರನ್ನೇ ಕೇಳಿ ಪಡೆಯಬೇಕು. ಹೀಗಂತ ಒಂದು ಆದೇಶವನ್ನು ಎರಡು ದಿನಗಳ ಕೆಳಗೆ ನೋಟಿಸ್ ಬೋರ್ಡ್‌ಗೆ ಅಂಟಿಸಲಾಗಿದೆ. ಅಲ್ಲಿಗೆ ಡಿವಿಜನಲ್ ಮ್ಯಾನೇಜರ್ ಇನ್ನು ಮುಂದೆ ರಜೆ ಕೊಡುವ ಹಾಗಿಲ್ಲ. ಸದ್ಯಕ್ಕೆ ಭಟ್ಟರಿಗೆ ಒಂದು ಕಿರುಕುಳ ತಪ್ಪಿದಂತಾಗಿದೆ. ಸಿಬ್ಬಂದಿ ಇನ್ನು ಮುಂದೆ ಹದ್ದುಬಸ್ತಿನಲ್ಲಿ ಇರುವ ಸಾಧ್ಯತೆಯೂ ಇದೆ.

ಜನವರಿ ೧೧ರಂದು ಸಂಪಾದಕೀಯದಲ್ಲಿ ಬರೆದದ್ದನ್ನು ನೆನಪಿಸಿಕೊಳ್ಳಿ:
ಮೃದು ಸ್ವಭಾವದ ತಿಮ್ಮಪ್ಪ ಭಟ್ಟರಿಗೆ ಉದಯವಾಣಿಯಲ್ಲಿ ಸಂಪಾದಕರಿಗೆ ನೀಡುವ ಪೂರ್ಣ ಅಧಿಕಾರವನ್ನು ಕೊಟ್ಟೇ ಇರಲಿಲ್ಲ. ಎಲ್ಲವೂ ಡಿವಿಜಿಜನಲ್ ಮ್ಯಾನೇಜರ್ ಒಬ್ಬನ ಕೈಯಲ್ಲೇ ಇತ್ತು. ಸಂಪಾದಕೀಯ ವಿಭಾಗ ಹೊರತುಪಡಿಸಿ ಉಳಿದ ವಿಭಾಗಗಳ ಸಿಬ್ಬಂದಿಗೆ ರಜೆ ನೀಡುವ, ನಿರಾಕರಿಸುವ ಅಧಿಕಾರವನ್ನೂ ಭಟ್ಟರಿಗೆ ನೀಡಲಾಗಿರಲಿಲ್ಲ. ಹೀಗಾಗಿ ಯಾವುದೂ ಅವರ ಕಂಟ್ರೋಲ್‌ನಲ್ಲೇ ಇರಲಿಲ್ಲ. ಡಿಟಿಪಿ ಆಪರೇಟರ್‌ಗಳು ತಿಂಗಳುಗಟ್ಟಲೆ ರಜೆ ಹಾಕಿದರೂ ಕೇಳುವವರು ಇರಲಿಲ್ಲ. ಇದರಿಂದ ಭಟ್ಟರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತುಗಳೂ ಇವೆ. 

ಕೊನೇ ಕುಟುಕು:
ಉದಯವಾಣಿಯಲ್ಲಿ ಆದ ಈ ಸಣ್ಣ ಬದಲಾವಣೆಗೆ ಸಂಪಾದಕೀಯ ಕಾರಣ ಎಂದು ನಾವು ಹೇಳುವುದಿಲ್ಲ. ಹಾಗೇನಾದರೂ ಹೇಳಿದರೆ ಸ್ತ್ರೀಲಿಂಗದ ಹೆಸರಲ್ಲಿ ಬ್ಲಾಗ್ ನಡೆಸುವ ಅಂತರ್ಲಿಂಗಿಯೊಂದು ವಿಕಾರವಾಗಿ ಚೀರಾಡಿ ನನ್ನ ವಿಮರ್ಶೆಯ ಕಥೆ ಗೋವಿಂದಾ, ಅಕ್ಕೋ, ಅಣ್ಣೋ, ಹಿಡಿರೀ-ತದುಕ್ರೀ ಎಂದು ಊಳಿಡುವ ಸಾಧ್ಯತೆ ಇದೆ. ಆ ಪ್ರಾಣಿಗೆ ಕಷ್ಟ ಕೊಡುವುದು ನಮಗೆ ಇಷ್ಟವಿಲ್ಲ.

READ MORE - ಸಂಯುಕ್ತ ಕರ್ನಾಟಕ: ವಲಸಿಗರು-ಮೂಲನಿವಾಸಿಗಳು!
On Monday, January 17, 2011 at 9:37 PM, 14 Companies of Los Angeles Firefighters, 4 LAFD Rescue Ambulances, 1 Urban Search and Rescue Unit, 1 Hazardous Materials Team, 2 EMS Battalion Captains, 4 Battalion Chief Officer Command Teams, 1 Division Chief Officer Command Team, Department of Water & Power, and Department of Transportation, under the direction of Battalion Chief Timothy Ernst responded to a Greater Alarm Structure Fire at 12500 West Raymer Street in North Hollywood.

LAFD Battles Auto Fire Inside North Hollywood Business
Thanks to Battalion 12 Chief Officer Command Team's keen awareness while driving through the North Hollywood area, they observed smoke poring out of a 135' X 50' commercial building. Quickly notifying Operations Control Division (LAFD's 9-1-1 dispatch center), additional firefighters immediately responded.

Routine firefighting operations such as Forcible Entry and Fire Attack rapidly commenced. The bulk of the flames were toward the front of the 6,600 square-foot building doing business as Star Marble & Tile. As Truck Companies ordered "all ladders off the truck", firefighters were able to climb their way to the conventional, gable truss roof and perform vertical ventilation. A small diameter hose line was also utilized atop the roof to extinguish flames.
LAFD Battles Auto Fire Inside North Hollywood Business

Shortly thereafter, firefighters inside made their way through dark, smoky conditions and located the seat of the fire which was an automobile fully involved in flames. Although almost 100 firefighters responded, the first arriving 51 were able to fully extinguish the blaze in just 16 minutes, before anyone was injured. Dollar loss from the fire has been estimated at $65,000 ($40,000 structure & $25,000 contents). The suspected cause of this late evening blaze is categorized as "arcing".

Submitted by Erik Scott, Spokesman
Los Angeles Fire Department
READ MORE - Commercial Building Fire In North Hollywood
ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಹಿಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶಂಕರ ಮಹದೇವ ಬಿದರಿ ಸಹ ಖಾರವಾದ ಪತ್ರವೊಂದನ್ನು ಬರೆದಿದ್ದರು. ಈ ಪತ್ರವೂ ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡಿರಲಿಲ್ಲ. ಉತ್ಸಾಹಿ ಬ್ಲಾಗರ್ ಅರಕಲಗೂಡು ಜಯಕುಮಾರ್ (ಇವರು ಅಭಿವ್ಯಕ್ತಿ ಎಂಬ ಬ್ಲಾಗ್ ನಡೆಸುತ್ತಾರೆ.) ಈ ಬಗ್ಗೆ ೨೦೦೯ರ ನವೆಂಬರ್‌ನಲ್ಲೇ ಬೆಳಕು ಚೆಲ್ಲಿದ್ದರು. ಅರಕಲಗೂಡು ಜಯಕುಮಾರ್ ಬರೆದ ಲೇಖನ: ಪೊಲೀಸರ ರಕ್ಷಣೆಯಲ್ಲಿ ಪತ್ರಕರ್ತ ಇರಬೇಕಾ?

ಸಂಪಾದಕೀಯದ ಓದುಗರಿಗಾಗಿ ಶಂಕರ ಬಿದರಿಯವರ ಪತ್ರದ ಪೂರ್ಣಪಾಠವನ್ನು ಪ್ರಕಟಿಸುತ್ತಿದ್ದೇವೆ.


                                                                                                                                  
                                                                                         ಬೆಂಗಳೂರು,
                                                                                          ದಿನಾಂಕ ೧೭-೧೧-೨೦೦೯.
ಗೆ,
ಸನ್ಮಾನ್ಯ ಶ್ರೀ ವಿಶ್ವೇಶ್ವರ ಭಟ್ಟರು,
ಸಂಪಾದಕರು,
ವಿಜಯ ಕರ್ನಾಟಕ ದಿನಪತ್ರಿಕೆ,
ಬೆಂಗಳೂರು.

ಮಾನ್ಯರೆ,

೧. ತಮ್ಮ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ವಿಜಯ ಕರ್ನಾಟಕ ಪತ್ರಿಕೆಯ ದಿನಾಂಕ ೧೭-೧೧-೨೦೦೯ರ ಬೆಂಗಳೂರು ಆವೃತ್ತಿಯ ಪುಠ ೯ರಲ್ಲಿ ಕಾನೂನು ಎಷ್ಟಕ್ಕೆ ಬಿಕರಿಯಾಗಿತ್ತು, ಹೇಳಿ ಬಿದರಿ ಅವರೇ?  ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿರುವ ತಮ್ಮ ವರದಿಗಾರರಾದ ಶ್ರೀ ರಾಘವೇಂದ್ರ ಭಟ್ಟರ ಲೇಖನವನ್ನು ಗಮನಿಸಿದ್ದೇನೆ.

೨. ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಸರಸ್ವತಿಪುರ ನಿವಾಸಿ ಎಂಬಿಎ ವಿದ್ಯಾರ್ಥಿನಿ ಪ್ರೇಮ ಪ್ರಕರಣ ಮತ್ತು ನಂತರ ಅವರಿಗಾದ ವಂಚನೆ ಪ್ರಸಂಗವು ನನ್ನ ಗಮನಕ್ಕೆ ದಿನಾಂಕ ೧೩-೧೧-೨೦೦೯ರಂದು ಮಧ್ಯಾಹ್ನ ಬಂದ ತಕ್ಷಣ, ಈ ಪ್ರಕರಣದಲ್ಲಿ ನ್ಯಾಯಯುತವಾದ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದು, ಅದರ ಪ್ರಕಾರ ಕ್ರಮ ಜರುಗುವಂತೆ ನೋಡಿಕೊಂಡಿದ್ದೇನೆ.  ಈ ಬಗ್ಗೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ದಿನಾಂಕ ೧೬-೧೧-೨೦೦೯ ರಂದು ನನ್ನನ್ನು ಭೇಟಿ ಮಾಡಿದ್ದು, ಅವರಿಗೆ ಕೈಗೊಂಡ ಕ್ರಮದ ಬಗ್ಗೆ ವಿವರಿಸಿದ್ದೇನೆ.  ತದ ನಂತರ, ಈ ಪ್ರಕರಣದಲ್ಲಿ ವಂಚಿತ ವಿದ್ಯಾರ್ಥಿನಿಯು ಮಾಡಿರುವ ಆರೋಪಗಳನ್ನು ಗಮನಿಸಿದ್ದೇನೆ.  ದಿನಾಂಕ ೧೪ ಮತ್ತು ೧೫ರಂದು ಸರ್ಕಾರಿ ರಜೆ ದಿನಗಳು ಇದ್ದ ಕಾರಣದಿಂದ,  ದಿನಾಂಕ ೧೬-೧೧-೨೦೦೯ರಂದು ನಾನು ನಮ್ಮ ಕಾರ್ಯಾಲಯ ಪ್ರಾರಂಭವಾದ ತಕ್ಷಣ ವಂಚಿತ ಹೆಣ್ಣು ಮಗಳು ಮಾಡಿರುವ ಆರೋಪಗಳ ವಿಚಾರಣೆಗೆ ಆದೇಶ ನೀಡಿದ್ದೇನೆ.

೩. ಈ ಪ್ರಕರಣದಲ್ಲಿ ವಂಚಿತ ಹೆಣ್ಣುಮಗಳ ಮತ್ತು ಸಾಮಾನ್ಯವಾಗಿ ಹೆಣ್ಣುಮಕ್ಕಳ ಕುಂದು-ಕೊರತೆಗಳ ಬಗ್ಗೆ ನನಗೆ ಇತರೆ ಯಾವುದೇ ವ್ಯಕ್ತಿ ಮತ್ತು ಸಂಘಟನೆಗಳಿಗೆ ಇರುವಷ್ಟೇ ಕಾಳಜಿ ಇದೆ ಮತ್ತು ಕಾನೂನು ಬದ್ಧವಾಗಿ ಇಂತಹ ಕುಂದು-ಕೊರತೆಗಳನ್ನು ನಾನು ಸತತವಾಗಿ ನಿರ್ವಹಿಸುತ್ತಿದ್ದೇನೆ.  ಈ ಹಿಂದೆ ಕೆಲವು ಭೂಮಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ, ಪೊಲೀಸರು ಕಾನೂನುಬಾಹಿರವಾಗಿ ನಡೆದುಕೊಂಡಿರಬಹುದು.  ಆ ಕಾರಣದಿಂದ ಈ ಪ್ರಕರಣದಲ್ಲಿ ಪೊಲೀಸರು ಕಾನೂನು ಬಾಹಿರವಾಗಿ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ನಾನು ನಂಬಿದ್ದೇನೆ.  ಈ ಪ್ರಕರಣದಲ್ಲಿ ವಂಚಿತ ಹೆಣ್ಣುಮಗಳ ಬಗ್ಗೆ  ನನಗೆ ಅಪಾರವಾದಂತ ಕಾಳಜಿ ಇದ್ದು, ಅವಳಿಗೆ ಆಗಿರುವ ಅನ್ಯಾಯದ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಈ ವಿಷಯದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ವರ್ಗದವರು ತಪ್ಪು-ತಡೆ ಎಸಗಿದ್ದರೆ ಕಠಿಣ ಕ್ರಮ ಕೈಗೊಳ್ಳಲು ನಾನು ಕಟಿಬದ್ದನಾಗಿದ್ದೇನೆ.  ನಮ್ಮ ಪ್ರತಿಕ್ರಿಯೆ ಮತ್ತು ನಾವು ಕೈಗೊಂಡಿರುವ ಕ್ರಮವು ಸಾರ್ವಜನಿಕರಿಗೆ ಮತ್ತು ಎಲ್ಲಾ ಮಾಧ್ಯಮದವರಿಗೆ ಗೊತ್ತಿದ್ದರೂ ಸಹಿತ,  ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವ ಶ್ರೀ ರಾಘವೇಂದ್ರ ಭಟ್ಟರ ಲೇಖನದಲ್ಲಿ ವಿಷಯವನ್ನು ತಿರುಚಿ ನಮ್ಮ ಇಲಾಖೆಯ ಮತ್ತು ವೈಯಕ್ತಿಕವಾಗಿ ನನ್ನ ವರ್ಚಸ್ಸಿಗೆ ಧಕ್ಕೆ ಬರುವಂತಹ ಲೇಖನವನ್ನು ಪ್ರಕಟಿಸಲಾಗಿದೆ.
 
: ಪುಟ: ೨ :
೪. ಕಳೆದ ಕೆಲವು ತಿಂಗಳಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವೃತ್ತಿಯಲ್ಲಿ  ನಾನು ಕೈಗೊಂಡಿರುವ ಕ್ರಮ ಮತ್ತು ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ಕುರಿತು ಹಲವಾರು ಪ್ರತಿಕೂಲ ವರದಿಗಳು ಪ್ರಕಟವಾಗಿರುತ್ತವೆ.  ಈ ಲೇಖನವೂ ಕೂಡಾ ಇದೇ ಸಾಲಿನಲ್ಲಿ ಇದೆ.  ನೀವು ದಿನಾಂಕ ೩೦-೦೬-೨೦೦೯ ರಂದು ತಮ್ಮ ಅಂಗರಕ್ಷಕರಾಗಿ ಪೊಲೀಸರನ್ನು ನಿಯುಕ್ತಗೊಳಿಸಲು ಅರ್ಜಿ ಸಲ್ಲಿಸಿರುವುದು ಸರಿಯಷ್ಠೆ.   ಈ ಬಗ್ಗೆ ಸೂಕ್ತ ವಿಚಾರಣೆ ಮಾಡಿಸಿ; ವಿಚಾರಣಾ ವರದಿಯನ್ನು ಆಧರಿಸಿ ನಿಮಗೆ ಪೊಲೀಸ್ ಅಂಗರಕ್ಷಕರನ್ನು ನಿಯಮಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ನಾನು ಬಂದಿರುವ ವಿಷಯ ನಿಮಗೆ ಗೊತ್ತಿದೆ.  ಈ ಬಗ್ಗೆ ತಮ್ಮ ವರದಿಗಾರರಾದ ಶ್ರೀ ರಾಘವೇಂದ್ರ ಭಟ್ಟರು ಮತ್ತು ಹಲವು ಉನ್ನತ ಮೂಲಗಳಿಂದ ಸಾಕಷ್ಟು ಒತ್ತಡ ಬಂದಿದ್ದರೂ, ನಾನು ನನ್ನ ನಿರ್ಧಾರಕ್ಕೆ ಬದ್ದನಾಗಿದ್ದೇನೆ.  ಈ ಕಾರಣದಿಂದಲೇ, ಕೆಲವು ತಿಂಗಳಿಂದ ನಾನು ಕೈಗೊಂಡ ವೃತ್ತಿಪರ ಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪೊಲೀಸ್ ಕಾರ್ಯನಿರ್ವಹಣೆಯ ಹಲವಾರು ಪ್ರತಿಕೂಲ ವರದಿಗಳು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿವೆ ಮತ್ತು ಈ ಲೇಖನವು ಸಹಿತ ಅದೇ ಕಾರಣದಿಂದ ಪ್ರಕಟವಾಗಿದೆ ಎಂದು ನಾನು ನಂಬಲು ಬಲವಾದ ಕಾರಣಗಳಿವೆ.  ಆದರೂ ಸಹಿತ ಪತ್ರಿಕಾ ಧರ್ಮವನ್ನು ತಿಳಿದಿರುವ ತಾವು, ಈ ತರಹದ ಕೃತ್ಯವನ್ನು ಎಸುಗುವುದಿಲ್ಲ ಎಂದು ನಂಬಲು ಪ್ರಯತ್ನಿಸುತ್ತಿದ್ದೇನೆ.

೫. ಈ ನನ್ನ ಪ್ರತಿಕ್ರಿಯೆಯಿಂದ ತಮ್ಮ ಪತ್ರಿಕೆಯಲ್ಲಿ ತಾವು ಸಾಕಷ್ಟು ವಿವಾದಗಳನ್ನು ಸೃಷ್ಟಿಸುವ ಮತ್ತು ಪ್ರತಿಕೂಲ ವರದಿಗಳನ್ನು ಬರೆಯುವ ಸಾಧ್ಯತೆ ಇದೆ ಎಂಬ ಸಂಪೂರ್ಣ ಅರಿವು ನನಗೆ ಇದೆ. ಎಂತಹದೇ ಪ್ರಬಲವಾದ ಪತ್ರಿಕೆಯಾದರೂ ಸಹಿತ, ಎಷ್ಟೇ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೂ,  ರಾಜ್ಯದ ಜನತೆಯು ಸಾಕಷ್ಟು ವಿವೇಚನೆಯಿಂದ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸತ್ಯವನ್ನು ತಿಳಿಯಲು ಶಕ್ತರಾಗಿದ್ದಾರೆ ಎಂದು ನಾನು ನಂಬಿದ್ದೇನೆ.
  
೬. ಬೆಂಗಳೂರು ನಗರ ಕೆಲವು ನಿಶ್ಚಿತ ವರ್ಗದವರಿಗೆ ಸುರಕ್ಷಿತ ನಗರವಾಗಿದೆ ಎಂದು ಬರೆದಿದ್ದೀರಿ.  ತಮಗೂ ಸಹಿತ ಬೆಂಗಳೂರು ಸುರಕ್ಷಿತ ನಗರವಾಗಿದೆ ಎಂಬುದನ್ನು ಮರೆಯದಿರಿ.

೭. ಹಲವಾರು ಕಾರಣಗಳಿಂದಾಗಿ ವಿಜಯ ಕರ್ನಾಟಕ ದಿನಪತ್ರಿಕೆಯು ರಾಜ್ಯದ ಒಂದು ಪ್ರಮುಖ ದಿನಪತ್ರಿಕೆಯಾಗಿ ಹೊರ ಹೊಮ್ಮಿದೆ.  ಈಗ ಅದು ಶತ-ಶತಮಾನಗಳಿಂದ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿರುವ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದೆ.  ಪ್ರತಿಷ್ಠಿತ ಮತ್ತು ಗೌರವಾನ್ವಿತ ಪತ್ರಿಕಾ ಸಮೂಹವಾದ  ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿರುವ ವಿಜಯ ಕರ್ನಾಟಕ ಪತ್ರಿಕೆ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ನಡೆಯಲಿ ಎಂದು ಆಶಿಸುತ್ತೇನೆ.

೮. ಪ್ರತಿಕಾ ಧರ್ಮಕ್ಕೆ ಅನುಗುಣವಾಗಿ, ಸದುದ್ದೇಶದ ರಚನಾತ್ಮಕ ಟೀಕೆಗಳನ್ನು ಸದಾ ಸ್ವಾಗತಿಸುತ್ತೇನೆ.

೯. ಆದರೆ, ವೈಯಕ್ತಿಕವಾದ ರಾಗದ್ವೇಷಗಳಿಂದ ಯಾವುದೇ ಪ್ರತಿಕೂಲ ಲೇಖನವಾಗಲೀ, ವರದಿಗಳಾಗಲೀ ತಮ್ಮ ಗೌರವಾನ್ವಿತ ಪತ್ರಿಕೆಯಲ್ಲಿ ಮೂಡದಿರಲೆಂದು ಆಶಿಸುತ್ತೇನೆ.
    
ಇಂತಿ ಆದರಗಳೊಂದಿಗೆ,
ನಿಮ್ಮ ವಿಶ್ವಾಸಿ,

ಸಹಿ/-
(ಶಂಕರ್ ಬಿದರಿ)
ಪೊಲೀಸ್ ಆಯುಕ್ತರು,
ಬೆಂಗಳೂರು ನಗರ.

ಅಜಯ್ ಕುಮಾರ್ ಸಿಂಗ್ ಅವರ ಪತ್ರಕ್ಕೂ ಶಂಕರ್ ಬಿದರಿಯವರ ಪತ್ರಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ. ಈ ಎರಡೂ ಪತ್ರಗಳನ್ನು ಓದಿದ ನಂತರ ತುಂಬಾ ಕಾಡುವ ಪ್ರಶ್ನೆ ಪತ್ರಿಕಾ ಸ್ವಾತಂತ್ರ್ಯ ಯಾವುದಕ್ಕೆ ಬಳಸಬೇಕು? ಯಾವುದಕ್ಕೆ ಬಳಸಬಾರದು? ಅಜಯ ಕುಮಾರ ಸಿಂಗ್ ಹೇಳಿದ್ದು ನಿಜ: ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಗಿ ಅಲ್ಲ.
READ MORE - ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಗಿ ಅಲ್ಲ!

Blog Archive